Tuesday, February 17, 2026
19.9 C
Bengaluru
Google search engine
LIVE
ಮನೆ#Exclusive NewsTop Newsಡಿಕೆಶಿ ಎಸೆದ ಗೂಗ್ಲಿಗೆ ಸಿದ್ದು ಕಂಗಾಲು! ನಾಯಕತ್ವ ಬದಲಾವಣೆ ಟ್ವಿಸ್ಟ್

ಡಿಕೆಶಿ ಎಸೆದ ಗೂಗ್ಲಿಗೆ ಸಿದ್ದು ಕಂಗಾಲು! ನಾಯಕತ್ವ ಬದಲಾವಣೆ ಟ್ವಿಸ್ಟ್

ಕರ್ನಾಟಕ ರಾಜಕಾರಣದಲ್ಲಿ ಈಗ ‘ನಾಯಕತ್ವ ಬದಲಾವಣೆ’ ವಿಚಾರ ಅಕ್ಷರಶಃ ಚದುರಂಗದಾಟದಂತೆ ಮಾರ್ಪಟ್ಟಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ವಿಚಾರವಾಗಿ ಹೊಸದೊಂದು ಗೂಗ್ಲಿ ಎಸೆಯುವ ಮೂಲಕ ಚೆಂಡನ್ನು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರ ಅಂಗಳಕ್ಕೆ ದಾಟಿಸಿದ್ದಾರೆ. “ಯಾವಾಗ ಏನು ನಡೆಯಬೇಕು ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತು, ಸಮಯ ಬಂದಾಗ ಅವರೇ ಎಲ್ಲವನ್ನೂ ಸ್ಪಷ್ಟಪಡಿಸುತ್ತಾರೆ” ಎಂದು ಹೇಳುವ ಮೂಲಕ, ಅಧಿಕಾರ ಹಸ್ತಾಂತರದ ಜವಾಬ್ದಾರಿಯನ್ನು ಚತುರತೆಯಿಂದ ಸಿಎಂ ಹೆಗಲಿಗೆ ಹಾಕಿದ್ದಾರೆ.

ಇದೇ ವೇಳೆ ಸಚಿವ ಹೆಚ್.ಸಿ.ಮಹದೇವಪ್ಪ ಅವರ “ನಾಯಿ ಬಾಲ ಅಲ್ಲಾಡಿಸಬಾರದು” ಎಂಬ ವಿವಾದಾತ್ಮಕ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಅತ್ಯಂತ ನಯವಾಗಿಯೇ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಯಾವುದೇ ನೇರ ಜಗಳಕ್ಕೆ ಇಳಿಯದ ಡಿಸಿಎಂ, “ನಾನು ಯಾರಿಗೂ ಉತ್ತರ ಕೊಡಲು ಸಿದ್ಧನಿಲ್ಲ, ನಾಯಕತ್ವದ ಬಗ್ಗೆ ನಾನೂ ಮತ್ತು ಸಿದ್ದರಾಮಯ್ಯ ಈಗಾಗಲೇ ಚರ್ಚಿಸಿದ್ದೇವೆ, ಮಲ್ಲಿಕಾರ್ಜುನ ಖರ್ಗೆ ಅವರಿಗೂ ಈ ಬಗ್ಗೆ ಸ್ಪಷ್ಟತೆ ಇದೆ” ಎಂದು ತಿಳಿಸಿದ್ದಾರೆ. ಇದು ಇಬ್ಬರು ನಾಯಕರ ನಡುವಿನ ‘ಗುಟ್ಟು’ ವ್ಯವಹಾರವೇನಲ್ಲ, ಹೈಕಮಾಂಡ್ ಸಾಕ್ಷಿಯಾಗಿ ನಡೆದ ತೀರ್ಮಾನ ಎಂದು ಹೇಳುವ ಮೂಲಕ ಶಾಸಕರು ಮತ್ತು ಸಚಿವರಿಗೆ ಮೌನವಾಗಿರುವಂತೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ವಿಚಾರ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಅಚ್ಚರಿ ಮೂಡಿಸಿದೆಯಂತೆ. “ಶಾಸಕರು ಫಾರಿನ್ ಟೂರ್ ಹೋಗುತ್ತಿರುವ ಬಗ್ಗೆ ನನಗೆ ಅಧಿಕೃತವಾಗಿ ಯಾರೂ ಮಾಹಿತಿ ನೀಡಿಲ್ಲ, ಯಾರಾದರೂ ಸ್ಪಾನ್ಸರ್ ಮಾಡುತ್ತಿದ್ದಾರೋ ಅಥವಾ ಅವರೇ ಹೋಗುತ್ತಿದ್ದಾರೋ ಗೊತ್ತಿಲ್ಲ” ಎಂದು ಹೇಳುವ ಮೂಲಕ ಪಕ್ಷದೊಳಗಿನ ಕೆಲವು ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರ ಈ ಪ್ರವಾಸವು ಅಧಿಕಾರ ಹಂಚಿಕೆಯ ಚರ್ಚೆಯನ್ನು ವಿಳಂಬ ಮಾಡುವ ತಂತ್ರವೇ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ. ಒಟ್ಟಿನಲ್ಲಿ, ಸಿದ್ದರಾಮಯ್ಯ ಅವರೇ ಸಮಯ ಬಂದಾಗ ಸತ್ಯ ಹೇಳ್ತಾರೆ ಎಂಬ ಡಿ.ಕೆ.ಶಿ ಮಾತು ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments