bengaluruರಾಜಕೀಯ

ಸಚಿವರಾಗಲಿರುವ 13 ನಾಯಕರು; ಯಾರಿಗೆ ಯಾವ ಖಾತೆ?

13 ministers in DKS Cabinet

ಬೆಂಗಳೂರು: ರಾಜ್ಯ ರಾಜಕಾರಣದ ಅತ್ಯಂತ ಮಹತ್ವದ ದಿನ ಇಂದು. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು ಗದ್ದುಗೆಗೇರುತ್ತಿದ್ದು, ಅವರ ಬೆನ್ನಲ್ಲೇ 13 ಮಂದಿ ಹಿರಿಯ ಹಾಗೂ ಪ್ರಮುಖ ಶಾಸಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಈ ಮೂಲಕ ರಾಜ್ಯದ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದ್ದು, ಇಷ್ಟು ದಿನ ಇದ್ದ ಉಪಮುಖ್ಯಮಂತ್ರಿ (DCM) ಹುದ್ದೆಯ ಸಸ್ಪೆನ್ಸ್‌ಗೆ ಕೊನೆಗೂ ತೆರೆ ಬಿದ್ದಿದೆ.ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ನಾಜೂಕಾಗಿ ಹೆಜ್ಜೆ ಇಟ್ಟಿದ್ದು, ಅನುಭವಿಗಳು ಹಾಗೂ ಹೊಸ ಮುಖಗಳ ಸಮತೋಲನದೊಂದಿಗೆ ಹೊಸ ಸರ್ಕಾರ ಮುನ್ನಡೆಯಲು ಸ್ಕೆಚ್ ಹಾಕಿದೆ.

ಹಳೇ ಮಂತ್ರಿವರ್ಯರ ಜೊತೆ ಇಬ್ಬರು ಹೊಸಬರಿಗೆ ಸಚಿವಗಿರಿ!

ಇಂದು ಪ್ರಮಾಣವಚನ ಸ್ವೀಕರಿಸಲಿರುವ ಒಟ್ಟು 14 ನಾಯಕರ ಪೈಕಿ 12 ಮಂದಿ ನಾಯಕರು ಈ ಹಿಂದಿನ ಸಿದ್ದರಾಮಯ್ಯ ಅವರ ಸಂಪುಟದಲ್ಲೂ ಸಚಿವರಾಗಿ ಕಾರ್ಯನಿರ್ವಹಿಸಿದ ಅಪಾರ ಅನುಭವ ಹೊಂದಿದ್ದಾರೆ. ಆಡಳಿತ ಯಂತ್ರಕ್ಕೆ ಯಾವುದೇ ಹಿನ್ನಡೆಯಾಗದಂತೆ ಮುನ್ನಡೆಸಲು ಈ ಹಿರಿಯ ನಾಯಕರನ್ನು ಯಥಾವತ್ತಾಗಿ ಮುಂದುವರೆಸಲಾಗಿದೆ. ಇವರ ಮಧ್ಯೆ ಇಬ್ಬರು ಪ್ರಮುಖ ನಾಯಕರು ಈ ಬಾರಿ ಹೊಸದಾಗಿ ಮಂತ್ರಿ ಪಟ್ಟವನ್ನು ಅಲಂಕರಿಸುತ್ತಿರುವುದು ವಿಶೇಷ.

ವಿಧಾನಸಭಾ ಸ್ಪೀಕರ್ ಆಗಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿ, ಸರ್ಕಾರದ ಸಚಿವರಿಗೇ ಬಿಸಿ ಮುಟ್ಟಿಸಿದ್ದ ಯು.ಟಿ. ಖಾದರ್ ಅವರು ಈ ಬಾರಿ ಸ್ಪೀಕರ್ ಸ್ಥಾನದಿಂದ ನೇರವಾಗಿ ಸಚಿವ ಸಂಪುಟಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಪ್ರಸ್ತುತ ಪರಿಷತ್ ಸದಸ್ಯರಾಗಿರುವ ಯತೀಂದ್ರ ಸಿದ್ದರಾಮಯ್ಯ ಅವರು ಈ ಬಾರಿ ಮೊದಲ ಬಾರಿಗೆ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ರಾಜ್ಯ ರಾಜಕಾರಣದ ಮುಂಚೂಣಿಗೆ ಬರಲಿದ್ದಾರೆ.

ಇಂದು ಪ್ರಮಾಣವಚನ ಸ್ವೀಕರಿಸಲಿರುವ ನಾಯಕರ ಪಟ್ಟಿ

ನಾಯಕರುಸಂಭಾವ್ಯ ಖಾತೆ
ಪ್ರಿಯಾಂಕ್‌ ಖರ್ಗೆಗೃಹ ಇಲಾಖೆ
ಎಂ.ಬಿ. ಪಾಟೀಲ್ಕೈಗಾರಿಕಾ ಇಲಾಖೆ
ಕೃಷ್ಣ ಬೈರೇಗೌಡಬೆಂಗಳೂರು ಅಭಿವೃದ್ಧಿ
ರಾಮಲಿಂಗ ರೆಡ್ಡಿಜಲಸಂಪನ್ಮೂಲ ಇಲಾಖೆ
ಯತೀಂದ್ರ ಸಿದ್ದರಾಮಯ್ಯನಗರಾಭಿವೃದ್ಧಿ ಇಲಾಖೆ
ಯು.ಟಿ. ಖಾದರ್ಆರೋಗ್ಯ ಇಲಾಖೆ
ಬೈರತಿ ಸುರೇಶ್ಗ್ರಾಮೀಣಾಭಿವೃದ್ಧಿ ಇಲಾಖೆ
ಶರಣಪ್ರಕಾಶ್ ಪಾಟೀಲ್ವೈದ್ಯಕೀಯ ಶಿಕ್ಷಣ

ಹಿರಿಯ ಮುತ್ಸದ್ದಿಗಳಾದ ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಸತೀಶ್ ಜಾರಕಿಹೊಳಿ ಹಾಗೂ ಈಶ್ವರ್ ಖಂಡ್ರೆ ಅವರಿಗೂ ರಾಜ್ಯದ ಪ್ರಮುಖ ಇಲಾಖೆಗಳ ಜವಾಬ್ದಾರಿ ಸಿಗುವುದು ಬಹುತೇಕ ಖಚಿತವಾಗಿದೆ. ಸಿಎಂ ಆಗಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಚಿವರ ದಂಡು ಇಂದಿನಿಂದ ಅಧಿಕೃತವಾಗಿ ಆಡಳಿತ ಚುಕ್ಕಾಣಿ ಹಿಡಿಯಲಿದ್ದು, ಇಡೀ ರಾಜ್ಯದ ಕಣ್ಣು ಈ ನೂತನ ಸಂಪುಟದ ಮೇಲಿದೆ.

:#DKShivakumar #KarnatakaCabinet #CabinetExpansion #YathindraSiddaramaiah #UTKhader #PriyankKharge #MBPatil #KarnatakaPolitics #FreedomTV #BreakingNewsKarnataka

Comments (0)

Your email address will not be published. Required fields are marked *

Back to top button