MYSOREಕ್ರೈಂ ಸ್ಟೋರಿಸುದ್ದಿ

ಕಿವುಡ-ಮೂಕ ವ್ಯಕ್ತಿಯ ನಾಪತ್ತೆ ಪ್ರಕರಣ ಕೊಲೆಯಲ್ಲಿ ಅಂತ್ಯ

ಮೈಸೂರು: ನಂಜನಗೂಡು ತಾಲ್ಲೂಕಿನ ದೇವಿರಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಮಾತು ಬಾರದ ಮತ್ತು ಕಿವಿ ಕೇಳದ ವ್ಯಕ್ತಿಯ ನಾಪತ್ತೆ ಪ್ರಕರಣವು ಭೀಕರ ಕೊಲೆಯಲ್ಲಿ ಅಂತ್ಯಗೊಂಡಿರುವುದು ಮೈಸೂರು ಪೊಲೀಸರ ತನಿಖೆಯಿಂದ ಬಯಲಾಗಿದೆ. ಮಾಜಿ ಪತಿ ಸ್ವಾಮಿ (32) ಎಂಬುವವರನ್ನು ಅವರದ್ದೇ ದೋಷವಿರುವ (ಕಿವುಡ ಮತ್ತು ಮೂಕ) ವ್ಯಕ್ತಿಗಳಾದ ಶ್ರೀನಿವಾಸ್ ಮತ್ತು ಗಂಗಾಧರ್ ಎಂಬುವವರು ಹತ್ಯೆ ಮಾಡಿರುವುದು ದೃಢಪಟ್ಟಿದೆ. ಮಾರ್ಚ್ 4ರಂದು ಸ್ವಾಮಿ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಸವಿತಾ ದೂರು ನೀಡಿದ್ದರು. ಸವಿತಾ ಕೂಡ ಮಾತು ಬಾರದ ಮತ್ತು ಕಿವಿ ಕೇಳದ ಮಹಿಳೆಯಾಗಿದ್ದು, ಪೊಲೀಸರು ಪ್ರಕರಣದ ಆಳಕ್ಕಿಳಿದು ತನಿಖೆ ನಡೆಸಿದಾಗ ಈ ಕೊಲೆಯ ಹಿಂದಿರುವ ಅನೈತಿಕ ಸಂಬಂಧದ ಸ್ಕೆಚ್ ಬಯಲಾಗಿದೆ.

ಆರೋಪಿ ಶ್ರೀನಿವಾಸ್, ಸವಿತಾ ಜೊತೆಗೆ ಸದಾ ವಿಡಿಯೋ ಕಾಲ್‌ನಲ್ಲಿ ಸಂಪರ್ಕದಲ್ಲಿದ್ದು ಹಣಕಾಸಿನ ನೆರವು ನೀಡುತ್ತಿದ್ದನು. ಸವಿತಾಳನ್ನು ಮದುವೆಯಾಗಬೇಕೆಂಬ ಉದ್ದೇಶದಿಂದ ಆಕೆಯ ಪತಿ ಸ್ವಾಮಿಯನ್ನು ದಾರಿಯಿಂದ ತಪ್ಪಿಸಲು ಶ್ರೀನಿವಾಸ್ ಸಂಚು ರೂಪಿಸಿದ್ದನು. ತನ್ನ ಸ್ನೇಹಿತ ಗಂಗಾಧರ್ ಜೊತೆ ಸೇರಿ ಸ್ವಾಮಿಯನ್ನು ಕೊಲೆ ಮಾಡಿ ಮೃತದೇಹವನ್ನು ಬಾವಿಗೆ ಎಸೆದಿದ್ದಾಗಿ ಶ್ರೀನಿವಾಸ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಸವಿತಾ ಮತ್ತು ಶ್ರೀನಿವಾಸ್ ನಡುವಿನ ವಿಡಿಯೋ ಕಾಲ್ ಸಂಭಾಷಣೆಗಳೇ ಪೊಲೀಸರಿಗೆ ಕೊಲೆಯ ಸುಳಿವು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ನಂಜನಗೂಡು ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments (0)

Your email address will not be published. Required fields are marked *

Back to top button