Tamil naduರಾಜಕೀಯ

ತಮಿಳುನಾಡಿನ ನೂತನ ಡಿಜಿಪಿ ಮಹೇಶ್ ಕುಮಾರ್ ಅಗರ್ವಾಲ್!

New DGP for Tamilnadu

ಚೆನ್ನೈ: ತಮಿಳುನಾಡಿನಲ್ಲಿ ದಕ್ಷ ಪೊಲೀಸ್ ಅಧಿಕಾರಿಯ ನೇಮಕಾತಿಯಾಗಿದೆ. 1994ರ ಬ್ಯಾಚ್‌ನ ದಕ್ಷ ಐಪಿಎಸ್ ಅಧಿಕಾರಿ ಮಹೇಶ್ ಕುಮಾರ್ ಅಗರ್ವಾಲ್ ಅವರು ಇಂದು ತಮಿಳುನಾಡಿನ ನೂತನ ಡಿಜಿಪಿ ಹಾಗೂ ಪೊಲೀಸ್ ಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

ಮಹೇಶ್ ಕುಮಾರ್ ಅಗರ್ವಾಲ್ ಅವರು ಈ ಹಿಂದೆ ಗಡಿ ಭದ್ರತಾ ಪಡೆಯ (BSF) ವಿಶೇಷ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೋಲ್ಕತ್ತಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಿಎಸ್‌ಎಫ್‌ನ ಪೂರ್ವ ಕಮಾಂಡ್‌ನ ಹೆಚ್ಚುವರಿ ಉಸ್ತುವಾರಿಯನ್ನೂ ಅವರು ಯಶಸ್ವಿಯಾಗಿ ನಿಭಾಯಿಸಿದ್ದರು. ಕೇಂದ್ರ ಗೃಹ ಸಚಿವಾಲಯದ ಪ್ರಸ್ತಾಪದ ಮೇರೆಗೆ, ಕೇಂದ್ರ ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು (ACC) ಅಗರ್ವಾಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಎಸ್‌ಎಫ್‌ನಿಂದ ಅವರ ಮಾತೃ ಕೆಡರ್ ಆದ ತಮಿಳುನಾಡಿಗೆ ಮರಳಿ ಕಳುಹಿಸಲು ಅನುಮೋದನೆ ನೀಡಿದೆ.

ಪ್ರಮುಖ ಹುದ್ದೆಗಳ ಅನುಭವ, ರಾಷ್ಟ್ರಪತಿ ಪದಕ ವಿಜೇತ!


ಕೇಂದ್ರ ಸರ್ಕಾರದ ನಿಯೋಜನೆಗೆ ಹೋಗುವ ಮೊದಲು, ಅಗರ್ವಾಲ್ ಅವರು ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.ಅವರು ಗ್ರೇಟರ್ ಚೆನ್ನೈ ಪೊಲೀಸ್ ಕಮಿಷನರ್ ಆಗಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು.ಸಶಸ್ತ್ರ ಪೊಲೀಸ್ ವಿಭಾಗದ ಮಹಾನಿರ್ದೇಶಕರಾಗಿ ಹಾಗೂ ಸಿಬಿ-ಸಿಐಡಿ (CB-CID) ಯ ವಿಶೇಷ ಮಹಾನಿರ್ದೇಶಕರಾಗಿ ತನಿಖಾ ವಿಭಾಗದಲ್ಲೂ ಕೆಲಸ ಮಾಡಿದ್ದರು. ಅವರ ವಿಶಿಷ್ಟ ಸೇವೆಗಾಗಿ ‘ರಾಷ್ಟ್ರಪತಿಗಳ ಪೊಲೀಸ್ ಪದಕ’ ಮತ್ತು ‘ಮುಖ್ಯಮಂತ್ರಿಗಳ ಪದಕ’ ನೀಡಿ ಗೌರವಿಸಲಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಡಿಜಿಪಿ ಶಂಕರ್ ಜಿವಾಲ್ ಅವರ ನಿವೃತ್ತಿಯ ನಂತರ, ತಮಿಳುನಾಡು ರಾಜ್ಯಕ್ಕೆ ಪೂರ್ಣಾವಧಿ ಡಿಜಿಪಿ ಹುದ್ದೆ ಖಾಲಿ ಇತ್ತು. ಇದೀಗ ಅಗರ್ವಾಲ್ ಅವರ ನೇಮಕಾತಿಯೊಂದಿಗೆ ಇಲಾಖೆಗೆ ಹೊಸ ಚೈತನ್ಯ ಬಂದಂತಾಗಿದೆ.

ಸುಪ್ರೀಂ ಕೋರ್ಟ್‌ಗಾಗಿ ತಮಿಳುನಾಡಿನ ಹೊಸ ಕಾನೂನು ತಂಡ!
ಚೆನ್ನೈ: ನವದೆಹಲಿಯಲ್ಲಿರುವ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ವಿಜಯ್ ಸರ್ಕಾರ ಬೃಹತ್ ತೀರ್ಮಾನ ತೆಗೆದುಕೊಂಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಕಾನೂನು ಪ್ರಾತಿನಿಧ್ಯವನ್ನು ಸಂಪೂರ್ಣವಾಗಿ ಪುನರ್ರಚಿಸಿ ಹೊಸ ತಂಡವನ್ನು ನೇಮಿಸಿದೆ. ಹೊಸ ಅಡ್ವೊಕೇಟ್ಸ್-ಆನ್-ರೆಕಾರ್ಡ್ (Advocates-on-record) ಮತ್ತು ಹಿರಿಯ ವಕೀಲರನ್ನು ಒಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,ರೂಪಾಲಿ ಫ್ರಾನ್ಸಿಸ್ಕಾ ಸ್ಯಾಮ್ಯುಯೆಲ್, ಬಿ. ಕರುಣಾಕರನ್, ವೃಂದಾ ಭಂಡಾರಿ, ಜಯಶ್ರೀ ನರಸಿಂಹನ್ ಮತ್ತು ಕನಿಕಾ ಕಲೈಯರಸನ್ ಹಿರಿಯರ ಪಟ್ಟಿಯಲ್ಲಿದ್ದು, ಪ್ರಶಾಂತ್ ಚಂದ್ರ ಸೇನ್ ಮತ್ತು ಹರಿಪ್ರಿಯಾ ಪದ್ಮನಾಭನ್ ಅವರನ್ನು ತಾತ್ಕಾಲಿಕ ಆಧಾರದ ಮೇಲೆ ಹೆಚ್ಚುವರಿ ಅಡ್ವೊಕೇಟ್ ಜನರಲ್ (AAG) ಶ್ರೇಣಿಯ ವಕೀಲರನ್ನಾಗಿ ನೇಮಕ ಮಾಡಲಾಗಿದೆ. ಕಾನೂನು ಹೋರಾಟಗಳಲ್ಲಿ ರಾಜ್ಯದ ಹಿತಾಸಕ್ತಿಯನ್ನು ಎತ್ತಿಹಿಡಿಯಲು ಈ ಹೊಸ ಹಾಗೂ ನುರಿತ ವಕೀಲರ ತಂಡ ನೆರವಾಗಲಿದೆ ಎಂದು ತಮಿಳುನಾಡು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

#MaheshKumarAgarwal #TamilNaduNewDGP #IPS #BSF #TamilNaduPolice #SupremeCourt #AdvocatesOnRecord #ChennaiNews #FreedomTV #AdministrativeReform

Comments (0)

Your email address will not be published. Required fields are marked *

Back to top button