Monday, June 23, 2025
26.6 C
Bengaluru
Google search engine
LIVE
ಮನೆ#Exclusive Newsಮೂವರು ಪ್ರಭಾವಿ ಸಚಿವರ ಬುಡಕ್ಕೆ ಬರುತ್ತಾ ಲೋಕಾಯುಕ್ತ ಬುಕಿಂಗ್ ಗೇಟ್ ಹಗರಣ?

ಮೂವರು ಪ್ರಭಾವಿ ಸಚಿವರ ಬುಡಕ್ಕೆ ಬರುತ್ತಾ ಲೋಕಾಯುಕ್ತ ಬುಕಿಂಗ್ ಗೇಟ್ ಹಗರಣ?

ಲೋಕಾಯುಕ್ತ ಹೆಸರಲ್ಲಿ ಸುಲಿಗೆ ಕೇಸ್ ಗೆ ಮಿನಿಸ್ಟರ್ ಟ್ವಿಸ್ಟ್ ಸಿಕ್ಕಿದೆ. ರಾಜ್ಯದ ಮೂವರು ಪ್ರಭಾವಿ ಸಚಿವರ ಬುಡಕ್ಕೆ ಲೋಕಾಯುಕ್ತ ಬುಕಿಂಗ್ ಗೇಟ್ ಹಗರಣ ಬರುವಂತೆ ಕಾಣ್ತಿದೆ. ಬಂಧಿತ ಆರೋಪಿ ಜೊತೆ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳ ನಿಕಟ ನಂಟು ಇರುವುದು ಲೋಕಾಯುಕ್ತ ತನಿಖೆಯಲ್ಲಿ ಬಟಾಬಯಲಾಗಿದೆ.

ವಿಚಾರಣೆ ವೇಳೆ ಆರೋಪಿ ಪೇದೆ ನಿಂಗಪ್ಪ ಸ್ಫೋಟಕ ವಿಚಾರ ಬಯಲು ಮಾಡಿದ್ದಾನೆ. ಮೂವರು ಪ್ರಭಾವಿ ಸಚಿವರ ಆಪ್ತ ಕಾರ್ಯದರ್ಶಿಗಳ ಹೆಸರುಗಳನ್ನು ಬಹಿರಂಗಪಡಿಸಿದ್ದಾನೆ. ಶೀಘ್ರವೇ ಆ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ಲೋಕಾಯುಕ್ತ ಎಸ್​ಪಿ ನೊಟೀಸ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ. ವಿಚಾರಣೆಗೆ ಬರುವಂತೆ ನೊಟೀಸ್ ನೀಡಲಿದ್ದಾರೆ.

ಇದು ಮುಂದೆ ಆ ಮೂವರು ಸಚಿವರ ಬುಡಕ್ಕೂ ಬರುತ್ತಾ? ಆ ಮೂವರು ಪ್ರಭಾವಿ ಸಚಿವರ್ಯಾರು? ಅವರ ವಿಚಾರಣೆಯೂ ನಡೆಯುತ್ತಾ? ಎಂಬ ಪ್ರಶ್ನೆ ಎದುರಾಗಿದೆ. ಸಿದ್ದು ಸರ್ಕಾರಕ್ಕೆ ಹೊಸ ತಲೆ ನೋವು ಶುರುವಾಗಿದೆ.. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಹೊಸ ಮುಜುಗರಗಳು ಎದುರಾಗುತ್ತಿವೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments