Tuesday, June 24, 2025
26.6 C
Bengaluru
Google search engine
LIVE
ಮನೆ#Exclusive NewsTop Newsಡಿಸಿಸಿ ಬ್ಯಾಂಕ್ ಹಣ ದುರುಪಯೋಗ: ಬ್ಯಾಂಕ್ ಸಿಇಒ ವಿರುದ್ಧವೂ ಎಫ್‌ಐಆರ್

ಡಿಸಿಸಿ ಬ್ಯಾಂಕ್ ಹಣ ದುರುಪಯೋಗ: ಬ್ಯಾಂಕ್ ಸಿಇಒ ವಿರುದ್ಧವೂ ಎಫ್‌ಐಆರ್

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ (CAA) ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿ ನಡೆದಿರುವ ಹಣ ಮರುಪಯೋಗ, ವಂಚನೆ ದೂರಿನ ಸಂಬಂಧ ಮೂವರು ವ್ಯವಸ್ಥಾಪಕರನ್ನು ಅಮಾನತು ಗೊಳಿಸಲಾಗಿದೆ.

ಕೋಲಾರ ತಾಖೆ ಅಮರೇನ್ ಎಂ. ಕೆಜಿಎಫ್ ಶಾಖೆ ವ್ಯವಸ್ಥಾಪಕರಾಗಿದ್ದ ಶಾಖೆ ವ್ಯವಸ್ಥಾಪಕರಾಗಿದ್ದ ನಾಗರಾಜ್ ಜಿ.ಎನ್ ಹಾಗೂ ಚಿಂತಾಮಣಿ ಶಾಖೆ ವ್ಯವಸ್ಥಾಪಕರಾಗಿದ್ದ ನಾಗರಾಜ್ ಜಿ. ಅಮಾನತುಗೊಂಡವರು. ಒಟ್ಟು 19.37ಕೋಟಿ ಅವ್ಯವಹಾರ ನಡೆದಿರುವುದು ಗೊತ್ತಾಗಿದೆ. ಚಂಚಿಮಲೆಯ ಮುನೀಶ್ ಎಂಬುವರ ದೂರಿನ ಮೇಲೆ ಬ್ಯಾಂಕ್‌ನ ಅಂತರಿಕ ಪರಿವೀಕ್ಷಣಾ ಅಧಿಕಾರಿಗಳು ವಿಚಾರಣೆ ನಡೆಸಿ ನೀಡಿದ ವರದಿಯಲ್ಲೂ ಹಣ ದುರುಪಯೋಗ ಆಗಿರುವ ಉಲ್ಲೇಖವಿದೆ.

ಡಿಸಿಸಿ ಬ್ಯಾಂಕ್​ನ ಚಿಂತಾಮಣಿ ಶಾಖೆಯಲ್ಲಿ ₹2.24 ಕೋಟಿ ವಂಚನೆ ಹಾಗೂ ಅವ್ಯವಹಾರ ಆರೋಪ ಸಂಬಂಧ ಬ್ಯಾಂಕ್​​ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬಿ.ಎನ್ ಶೀಲಾ ವಿರುದ್ಧ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ನಾಗರಾಜ್ ಜಿ ಹಾಗೂ ಮಾಜಿ ಮೇಲ್ವಚಾರಕ ಸಂತೋಷ್ ಕೆ. ಪ್ರಮುಖ ಆರೋಪಿಗಳು. ಇವರಲ್ಲದೇ, ಬೊಮ್ಮೆಪಲ್ಲಿ ಅಂಕಾಲಮಡಗು, ಯನಮಲಪಾಡಿ ವ್ಯವಸಾಯ ಸೇವಾ ಸಹಕಾರ ಸಂಘಗಳ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧವೂ ಎಫ್​​ಐಆರ್ ದಾಖಲಾಗಿತ್ತು.

ಸ್ವಸಹಾಯ ಸಂಘಗಳ ಸಾಲವನ್ನು ವಸೂಲಾತಿ ಆಧಾರದ ಮೇಲೆ ಬಡ್ಡಿ ಸಹಾಯಧನ ಪಡೆಯಲು ಅವಕಾಶವಿದೆ. ಚಿಂತಾಮಣಿ ಶಾಖೆ ಅಧಿಕಾರಿಗಳು ಸರ್ಕಾರದಿಂದ ಬರಬೇಕಾದ ಬಡ್ಡಿ ಬಾಬತ್ತು ಎಂಬ ನಕಲಿ ಖಾತೆ ಸೃಷ್ಟಿಸಿ, ವಸೂಲಾತಿ ತೋರಿಸಿ 2021ರ ಅ.29ರಿಂದ 2022ರ ಫೆ.4ರ ಅವಧಿಯಲ್ಲಿ ₹2.24ಕೋಟಿ ಬಡ್ಡಿ ತೆಗೆದುಕೊಂಡಿದ್ದಾರೆ. ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದು, ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಬ್ಯಾಕ್​ನ ಆಂತರಿಕ ಪರಿವೀಕ್ಷಣಾಧಿಕಾರಿ ವರದಿಯಲ್ಲೂ ಈ ಅಂಶದ ಉಲ್ಲೇಖವಿದೆ ಎಂದು ದೂರು ದಾಖಲಾಗಿತ್ತು.

ಚಿಂತಾಮಣಿ ಶಾಖೆಯಲ್ಲಿ ಬೇನಾಮಿ ಸ್ವಸಹಾಯ ಸಂಘಗಳನ್ನು ರಚಿಸಿ ಸಾಲವನ್ನು ಪಡೆದು, ಆ ಸಂಘಗಳ ವಸೂಲಿಗೆ ಬ್ಯಾಂಕ್​​​​​ನ ಬಂಡವಾಳವನ್ನು ಬಳಸಿ ದುರುಪಯೋಗಪಡಿಸಿಕೊಳಡಿದ್ದಾರೆ ಎಂದು ತಳಗವಾರದ ಟಿ.ಎಸ್ ಪ್ರತಾಫ್ ಕುಮಾರ್ ಎಂಬುವವರು ದೂರು ನೀಡಿದ್ದರು.

ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಬ್ಯಾಂಕ್‌ನ ಸಿಇಒ ಶೀಲಾ ಕ್ರಮ ವಹಿಸಿಲ್ಲ. ಪ್ರಕರಣ ಬೆಳಕಿಗೆ ಬಂದ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಪ್ರಕರಣದಲ್ಲಿ ಭಾಗಿಯಾದ ನೌಕರರನ್ನು ಅಮಾನತು ಮಾಡದೆ ಸಾಕ್ಷ್ಯ ನಾಶ ಮಾಡಲು ಸಹಕರಿಸಿ ನಬಾರ್ಡ್ ನಿಯಮ ಉಲ್ಲಂಘಿಸಿದ್ದಾರೆ. ಸಂತರ ನೋಟಸ್ ನೀಡಿದು, ಹಣ ವಾಪಸಾಗಿಲ್ಲ ಎಂದೂ ದೂರಿದ್ದರು.

ಕೋಲಾರ ಶಾಖೆಯಲ್ಲಿ 2017ರಿಂದ 201ನೇ ಸಾಲಿನವರೆಗೆ 1.5ಕೋಟಿ ದುರುಪಯೋಗ ನಡೆದಿದೆ ಎಂಬುದಾಗಿ ಚಂಚಿಮಲೆ ಮುನೀಶ್ ದೂರು ನೀಡಿದ್ದರು. ಬ್ಯಾಂಕ್‌ನ ಅಂತರಿಕ ಪರಿವೀಕ್ಷಣಾ ತಂಡ ಈ ಸಂಬಂಧ ವರದಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಶಾಖೆ ವ್ಯವಸ್ಥಾಪಕ ಅಮರೇಶ್ ಅವರನ್ನು ಅಮಾನತುಗೊಳಿಸಲಾಗಿದೆ.

ಕೆಜಿಎಫ್ ಶಾಖೆಯಲ್ಲಿ 2020ರಿಂದ 2022ರ ಅವಧಿಯಲ್ಲಿ ನಡೆದಿದೆ ಎನ್ನಲಾದ ₹4.17ಕೋಟಿ ಅವ್ಯವಹಾರ ಸಂಬಂಧ ವ್ಯವಸ್ಥಾಪಕ ಗಿರೀಶ್ ಅವರನ್ನು ಅಮಾನತುಗೊಳಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಂಡಿಬಂಡೆ ಶಾಖೆಯಲ್ಲಿ 2023-24ನೇ ಸಾಲಿನಲ್ಲಿ ₹1.96 ಕೋಟಿ ಅವ್ಯವಹಾರ ನಡೆದಿರುವ ಸಂಬಂಧ ನೌಕರರಾದ ಸುವರ್ಣಮೂರ್ತಿ ಹಾಗೂ ಅನಿಲ್ ಕುಮಾರ್ ಮೇಲೆ ಎಫ್​​​ಐಆರ್ ದಾಖಲಾಗಿದೆ. ಅವರನ್ನೂ ಹಿಂದೆ ಅಮಾನತುಗೊಳಿಸಲಾಗಿತ್ತು.

ಹಣಕಾಸಿನ ಅವ್ಯವಹಾರ ಸಂಬಂಧ ಪ್ರತಿಕ್ರಿಯೆ ಪಡೆಯಲು ಡಿಸಿಸಿ ಬ್ಯಾಂಕ್​ನ ಮೊಬೈಲ್ ಸಂಖ್ಯೆಗೆ ಕರೆ ಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲದಲ ಸಿಇಒ ಶೀಲಾ ಪ್ರತಿಕ್ರಿಯಿಸಿ, ಮೂವರನ್ನು ಅಮಾನತುಗೊಳಿಸಿರುವುದನ್ನು ಖಚಿತ ಪಡಿಸಿದರು.

‘ಡಿಸಿಸಿ ಬ್ಯಾಂಕ್‌ನಲ್ಲಿ ಕಳೆದ 10 ವರ್ಷಗಳಿಂದ ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿದೆ. ಹಲವರನ್ನು ರಕ್ಷಿಸಲಾಗಿದೆ. ಇದರಿಂದ ಬ್ಯಾಂಕ್‌ಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ನಬಾರ್ಡ್ ಹಾಗೂ ಆರ್‌ಬಿಐ ಸುತ್ತೋಲೆ ಉಲ್ಲಂಘಿಸಲಾಗಿದೆ. ಶೀಲಾ ಹಾಗೂ ಸಲೀಂ ಕರ್ತವ್ಯಲೋಪ ಎಸಗಿದ್ದಾರೆ ಎಂದು ದೂರುದಾರ ಮುನೀಶ್ ತಿಳಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments