Tuesday, June 24, 2025
26.6 C
Bengaluru
Google search engine
LIVE
ಮನೆ#Exclusive NewsTop Newsಕಾಳಿಂಗ ಸರ್ಪದಲ್ಲಿ 4 ವಿಭಿನ್ನ ಪ್ರಭೇದ: ಹೊಸ ಅಧ್ಯಯನದಿಂದ ಸಾಬೀತು; ವಿಡಿಯೋ!

ಕಾಳಿಂಗ ಸರ್ಪದಲ್ಲಿ 4 ವಿಭಿನ್ನ ಪ್ರಭೇದ: ಹೊಸ ಅಧ್ಯಯನದಿಂದ ಸಾಬೀತು; ವಿಡಿಯೋ!

ಹುಬ್ಬಳ್ಳಿ: ಜಗತ್ತಿನಲ್ಲಿ ನಾಲ್ಕು ಪ್ರಭೇದಗಳ ಕಾಳಿಂಗ ಸರ್ಪಗಳಿರುವುದು ತಿಳಿದು ಬಂದಿದೆ. ವಿಶ್ವದ ಅತಿ ಉದ್ದದ ವಿಷಕಾರಿ ಹಾವು ನಾಲ್ಕು ವಿಭಿನ್ನ ಜಾತಿಗಳನ್ನು ಹೊಂದಿದೆ ಎಂದು ಶಿವಮೊಗ್ಗದ ವನ್ಯ ಜೀವಿ ತಜ್ಞ ಗೌರಿಶಂಕರ್‌ ಸಾಬೀತುಪಡಿಸಿದ್ದಾರೆ. 1836 ರಲ್ಲಿ ಮೊದಲು ಆವಿಷ್ಕಾರವಾಗಿದ್ದರೂ ಈಗ ಅಂದರೆ 185 ವರ್ಷಗಳ ನಂತರ ಈ ಹೊಸ ಅಧ್ಯಯನ ಸಾಬೀತಾಗಿದೆ.

ಈ ಹಿಂದೆ ಅನೇಕ ವಿಜ್ಞಾನಿಗಳು ನಾಲ್ಕು ಪ್ರಭೇದ ಕುರಿತಾದ ತಮ್ಮ ಊಹೆಗಳನ್ನು ಪ್ರಸ್ತಾಪಿಸಿದ್ದರು, ಆದರೆ ಅವುಗಳ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದಲೇ ಗೌರಿ ಶಂಕರ್ ಅವರು ಪಿಎಚ್‌ಡಿ ಸಂಶೋಧನೆಗೆ ಈ ವಿಷಯವನ್ನೇ ಆಯ್ಕೆ ಮಾಡಿಕೊಂಡರು. ಹೀಗಾಗಿ 2012 ರಲ್ಲಿ, ಅವರು ತಮ್ಮ ಅಧ್ಯಯನವನ್ನು ಯೋಜಿಸಲು ಹಾಗೂ ಕಾರ್ಯಗತಗೊಳಿಸಲು ವಿವಿಧ ಸಂಸ್ಥೆಗಳು, ವಿಶ್ವವಿದ್ಯಾಲಯಗಳೊಂದಿಗೆ ಸೇರಿಕೊಂಡರು.

ಐಐಎಸ್‌ಸಿಯ ಡಾ ಕಾರ್ತಿಕ್ ಶಂಕರ್ ಅವರ ಮೇಲ್ವಿಚಾರಣೆಯಲ್ಲಿ, ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾಲಯದ ಡಾ ಎಸ್‌ಕೆ ದತ್ತಾ (ಪ್ರೊ. ಎಮೆರಿಟಸ್) ಮತ್ತು ಪ್ರೊ ಜೇಕಬ್ ಹೊಗ್ಲುಂಡ್ ಅವರು ವಿವಿಧ ಆವಾಸಸ್ಥಾನಗಳಲ್ಲಿ ಕಾಳಿಂಗ ಸರ್ಪಗಳ ಅಂಗಾಂಶ ಮಾದರಿಗಳನ್ನು ಸಂಗ್ರಹಿಸಿ ವಿವಿಧ ರೂಪಾಂತರಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಖ್ಯಾತ ಉರಗ ತಜ್ಞ ಗೌರಿ ಶಂಕರ್ ಅವರು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹಲವಾರು ದೇಶಗಳಲ್ಲಿ ಅಧ್ಯಯನದ ನೇತೃತ್ವ ವಹಿಸಿದ್ದು, 10 ವರ್ಷಗಳ ಕಾಲ ನಡೆಸಿದ ಅಧ್ಯಯನ ಬಳಿಕ ನಾಲ್ಕು ಪ್ರಭೇದಗಳನ್ನು ಒಳಗೊಂಡಿದೆ. ಅವುಗಳ ಆವಾಸ ಸ್ಥಳ, ಪ್ರಾಣಿಸಂಗ್ರಹಾಲಯಗಳು ಹಾಗೂ ವಸ್ತುಸಂಗ್ರಹಾಲಯಗಳಿಂದ ಅಂಗಾಂಶ ಮಾದರಿಗಳನ್ನು ಸಂಗ್ರಹಿಸಿದ್ದೇವೆ. ನಂತರದಲ್ಲಿ ಡಿಎನ್ಎ ಅನುಕ್ರಮಗಳನ್ನು ಪಡೆಯಲು ಈ ಮಾದರಿಗಳನ್ನು ಸಂಸ್ಕರಿಸಿತು. ನಾವು ವಿವಿಧ ಪ್ರದೇಶಗಳ ರಾಜ ನಾಗರಹಾವುಗಳ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದು, ಅವುಗಳ ಭೌತಿಕ ಗುಣಲಕ್ಷಣಗಳನ್ನು ಅಧ್ಯಯನ ಮಾಡಿದ್ದೇವೆ. ಆ ಬಳಿಕ ಕಾಳಿಂಗ ಸರ್ಪವು ನಾಲ್ಕು ಪ್ರಭೇದಗಳಿವೆ ಎಂದು ನಿರ್ಣಯಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಈ ಕಾಳಿಂಗ ಸರ್ಪದ ನಾಲ್ಕು ಪ್ರಭೇದಗಳಲ್ಲೂ ಎರಡು ಭಾರತದಲ್ಲಿ ಕಂಡುಬರುತ್ತವೆ. ಭಾರತದಲ್ಲಿರುವ ಒಂದು ಕಾಳಿಂಗ ಸರ್ಪಗಳಲ್ಲಿ ಒಂದನ್ನು ಓಫಿಯೋಫಾಗಸ್ ಕಾಳಿಂಗ ಎಂದು ಹೆಸರಿಸಿದ್ದಾರೆ. ರಾಜ್ಯ ಅರಣ್ಯ ಇಲಾಖೆ ಈ ತಿಂಗಳು ಘೋಷಣೆ ಮಾಡುವ ನಿರೀಕ್ಷೆಯಿದೆ. IUCN ರೆಡ್ ಲಿಸ್ಟ್ ಆಫ್ ಥ್ರೆಟೆನ್ಡ್ ಸ್ಪೀಷೀಸ್ ಅಸೆಸ್‌ಮೆಂಟ್ (IUCN, 2012) ಅಡಿಯಲ್ಲಿ ರಾಜ ನಾಗರಹಾವನ್ನು “ದುರ್ಬಲ” ಎಂದು ವರ್ಗೀಕರಿಸಲಾಗಿದೆ ಎಂದಿದ್ದಾರೆ.

ಆವಾಸಸ್ಥಾನ ನಾಶ, ಚರ್ಮದ ಮಾರಾಟ, ಆಹಾರ, ಔಷಧ ಮತ್ತು ಸಾಕುಪ್ರಾಣಿಯಾಗಿ ಅವುಗಳ ಬಳಕೆ ಮಾಡುತ್ತಿರುವುದರಿಂದ ಕಾಳಿಂಗ ಸರ್ಪದ ಸಂತತಿ ಅಳಿವಿನ ಅಂಚಿಗೆ ಬರುತ್ತಿದೆಎಂದು ಅವರು ಹೇಳಿದರು.

ಮೂಲಭೂತ ಮತ್ತು ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರಿಸುವುದರ ಹೊರತಾಗಿ, ಈ ಅಧ್ಯಯನವು ಯಾವ ಜಾತಿಯ ಕಾಳಿಂಗ ಸರ್ಪಗಳಿಗೆ ತಕ್ಷಣದ ಗಮನ ನೀಡ ಬೇಕು ಮತ್ತು ಯಾವ ಸಂರಕ್ಷಣಾ ಕ್ರಮಗಳ ಅನುಷ್ಠಾನದ ಅಗತ್ಯವಿದೆ ಎಂಬುದನ್ನು ನಿರ್ಣಯಿಸಲು ತಕ್ಷಣವೇ ಸಹಾಯ ಮಾಡುತ್ತದೆ.

ಇದು ಈ ವಿವಿಧ ಜಾತಿಗಳ ವಿಷದ ಸಂಯೋಜನೆಯನ್ನು ಸಹ ಅಧ್ಯಯನ ಮಾಡುತ್ತದೆ. ವಿಷ ತೆಗೆಯುವ ಮತ್ತು ಹಾವು ಕಡಿತದ ತಗ್ಗಿಸುವಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments