Uncategorized

ಈಗ ಬೆಂಗಳೂರು ಪೊಲೀಸರಿಗೆ ಹರೀಶ್ ಪೂಂಜಾ ಸವಾಲ್

ಬೆಳ್ತಂಗಡಿಯಲ್ಲಿ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳ ವಿರುದ್ಧ ತೊಡೆತಟ್ಟಿ ಸುದ್ದಿಯಾಗಿದ್ದ ಶಾಸಕ ಹರೀಶ್ ಪೂಂಜಾ ಇದೀಗ ಬೆಂಗಳೂರಿಗೆ ನುಗ್ಗಿದ್ದಾರೆ. ಪೊಲೀಸರಿಗೆ ಅವಾಜ್ ಹಾಕಿ ಪೂಂಜಾ ಭರ್ಜರಿ ಹವಾ ಕ್ರಿಯೇಟ್ ಮಾಡಿದ್ದರು. ಇದೀಗ ಪುನೀತ್ ಕೆರೆಹಳ್ಳಿ ಪ್ರಕರಣದಲ್ಲಿ ನ್ಯಾಯಕೇಳಲು ಪೂಂಜಾ ಮುಂದಾಗಿದ್ದಾರೆ. ಇಂದು ಬೆಂಗಳೂರಿನ ಬಸವೇಶ್ವರ ನಗರದ ಎಸಿಪಿ ಕಚೇರಿ ಮುಂದೆ ಕೇಸರಿ ಬ್ರಿಗೇಡ್ ಪ್ರತಿಭಟನೆ ನಡೆಸ್ತಿದೆ. ಇದೇ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡ ಆಗಮಿಸಿದ್ದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹರೀಶ್ ಪೂಂಜಾ ಅಪಾರ ಬೆಂಬಲಿಗರು ಕೂಡ ಎಸಿಪಿ ಕಚೇರಿ ಮುಂದೆ ಜಮಾಯಿಸಿದ್ದಾರೆ.

Comments (0)

Your email address will not be published. Required fields are marked *

Back to top button