mangaloreಜಿಲ್ಲೆ

ತಂಗಿಯ ಸಾವಿನಿಂದ ಮನನೊಂದು ಸಹೋದರ ಆತ್ಮಹತ್ಯೆ!

ಮಂಗಳೂರು : ತಂಗಿಯ ಸಾವಿನಿಂದ ಮನನೊಂದು ಸಹೋದರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಬಜಪೆ ಬಳಿಯ ಖಾಸಗಿ ಲಾಡ್ಜ್​​ನಲ್ಲಿ ನಡೆದಿದೆ. ಕೇರಳದ ಬೇಕಲ್ ಮೂಲದ ಅರ್ಜುನ್ ಮಹೇಶ್ (24) ಮೃತ ದುರ್ದೈವಿ.

ಕಳೆದ ಜೂನ್‌ನಲ್ಲಿ ನೀಟ್​ ಪರೀಕ್ಷೆ ಲೀಕ್​ ಬಳಿಕ ಸಹೋದರಿ ಐಜಾ ಆತ್ಮಹತ್ಯೆಗೆ ಶರಣಾಗಿದ್ದಳು. ತಂಗಿಯ ಸಾವಿನಿಂದ ತೀವ್ರವಾಗಿ ಮನನೊಂದಿದ್ದ ಅರ್ಜುನ್, ಗಲ್ಫ್​​ನಿಂದ ಮಂಗಳೂರಿಗೆ ಬಂದ ಕೆಲವೇ ಗಂಟೆಗಳಲ್ಲಿ ಸೂಸೈಡ್​ ಮಾಡಿಕೊಂಡಿದ್ದಾನೆ.

ಗಲ್ಪ್‌ನಲ್ಲಿ ಉದ್ಯೋಗದಲ್ಲಿದ್ದ ಅರ್ಜುನ್​​​ ಭಾನುವಾರ ಗಲ್ಫ್​​ನಿಂದ ಮಂಗಳೂರಿಗೆ ಬಂದಿದ್ದ. ಯುವಕ ಗಲ್ಫ್‌ನಿಂದ ಬಂದರೂ ಮನೆಗೆ ತಲುಪಿರಲಿಲ್ಲ. ಹಾಗಾಗಿ ಅರ್ಜುನ್‌ಗೆ ಕುಟುಂಬಸ್ಥರು ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್‌ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು.

ಈ ವೇಳೆ ಬಜಪೆಯ ಮರವೂರಿನ ಲಾಡ್ಜ್‌ನಲ್ಲಿ ಅರ್ಜುನ್ ಶವ ಪತ್ತೆಯಾಗಿದೆ. ತಂಗಿಯ ಅಗಲಿಕೆಯ ನೋವನ್ನು ತಾಳಲಾರದೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದು ತನಿಖೆಯಲ್ಲಿ ತಿಳಿದುಬಂದಿದೆ.

Comments (0)

Your email address will not be published. Required fields are marked *

Back to top button