Wednesday, February 11, 2026
26.6 C
Bengaluru
Google search engine
LIVE
ಮನೆ#Exclusive NewsTop Newsಸಿಸಿಎಲ್ ಸಂಭ್ರಮದಲ್ಲಿ ಮೆಣಸಿನಕಾಯಿ ಯಾಕೆ?ಕಿಚ್ಚ ಸುದೀಪ್ ಮಾರ್ಮಿಕ ನುಡಿ

ಸಿಸಿಎಲ್ ಸಂಭ್ರಮದಲ್ಲಿ ಮೆಣಸಿನಕಾಯಿ ಯಾಕೆ?ಕಿಚ್ಚ ಸುದೀಪ್ ಮಾರ್ಮಿಕ ನುಡಿ

ಕನಕಪುರ ಶ್ರೀನಿವಾಸ್ ಅವರು ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಚಿತ್ರರಂಗದ ಪ್ರಮುಖರು ಹಾಗೂ ರಾಜಕೀಯ ಗಣ್ಯರ ವಿರುದ್ಧ ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಡಿ.ಕೆ. ಶಿವಕುಮಾರ್, ಧ್ರುವ ಸರ್ಜಾ, ಎ.ಪಿ. ಅರ್ಜುನ್, ಜೋಗಿ ಪ್ರೇಮ್ ಮತ್ತು ದಿವಂಗತ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರ ಬಗ್ಗೆ ಅವರು ಹಗುರವಾಗಿ ಮಾತನಾಡಿದ್ದು, ಈ ವರ್ತನೆಗೆ ಇಡೀ ಚಿತ್ರರಂಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಜಯಭೇರಿ ಬಾರಿಸಿದ ಸಂಭ್ರಮದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರಿಗೆ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಮಾಧ್ಯಮಗಳು ಪ್ರಶ್ನಿಸಿದವು. ಈ ವೇಳೆ ಸುದೀಪ್ ಅವರು ಪರಿಸ್ಥಿತಿಯನ್ನು ಬಹಳ ಸಂಯಮದಿಂದ ಮತ್ತು ಮಾರ್ಮಿಕವಾಗಿ ನಿಭಾಯಿಸಿದ್ದಾರೆ.

ಇದು ಸಿಸಿಎಲ್ ಗೆಲುವಿನ ಸಂಭ್ರಮವನ್ನು ಹಂಚಿಕೊಳ್ಳುವ ವೇದಿಕೆಯಾಗಿದ್ದು, ಸಿಹಿ ತಿನ್ನುವ ಈ ಸಂದರ್ಭದಲ್ಲಿ ಮೆಣಸಿನಕಾಯಿಯಂತಹ ಕಹಿ ವಿಷಯಗಳ ಚರ್ಚೆ ಬೇಡ , ನಾವು ಈ ಕಪ್ ಗೆಲ್ಲಲು ದೀರ್ಘವಾದ 12 ವರ್ಷಗಳ ಕಾಲ ಕಾದಿದ್ದೇವೆ, ಹಾಗೆಯೇ ತಮ್ಮ ಉತ್ತರದ ಬಗ್ಗೆಯೂ ಸ್ವಲ್ಪ ಕಾಲ ಕಾಯುವಂತೆ ತಿಳಿಸಿದರು.

ಮುಂದಿನ ದಿನಗಳಲ್ಲಿ ಸೂಕ್ತ ವೇದಿಕೆಯಲ್ಲಿ ಈ ಬಗ್ಗೆ ಖಂಡಿತವಾಗಿಯೂ ಮಾತನಾಡಲಿದ್ದೇನೆ ಎಂದು ಭರವಸೆ ನೀಡಿದ ಅವರು, ಈಗ ಲಾಡು ಸವಿಯುವ ಸಮಯವೇ ಹೊರತು ಮೆಣಸಿನಕಾಯಿ ಕಚ್ಚುವ ಸಮಯವಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಇದು ತಮ್ಮ 30 ವರ್ಷಗಳ ವೃತ್ತಿಜೀವನದ ಅನುಭವದ ಮಾತು ಎಂದು ಹೇಳುವ ಮೂಲಕ ಅನಗತ್ಯ ವಿವಾದಕ್ಕೆ ಆ ವೇದಿಕೆಯಲ್ಲಿ ಅವಕಾಶ ನೀಡದೆ ವಿಷಯಕ್ಕೆ ಪೂರ್ಣವಿರಾಮ ಇಟ್ಟರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments