ಈ ವಾರ ಜೋಡಿ ಟಾಸ್ಕ್ನಲ್ಲಿ ಧನರಾಜ್ ಹಾಗೂ ಮೋಕ್ಷಿತಾ ಒಂದೇ ತಂಡದಲ್ಲಿ ಇದ್ದರು. ಮೊದಲಿನಿಂದಲೂ ಇವರ ಮಧ್ಯೆ ಮುನಿಸು ಇತ್ತು. ಟಾಸ್ಕ್ ಆಡುವಾಗ ಹೆಚ್ಚಾಗಿದೆ. ಇವರ ಮಧ್ಯೆ ಕಿರಿಕ್ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಹಾಗೂ ಧನರಾಜ್ ಮಧ್ಯೆ ಯಾವುದೂ ಸರಿ ಇಲ್ಲ. ಇವರು ಸಮಯ ಸಿಕ್ಕಾಗಲೆಲ್ಲ ಕಿತ್ತಾಡಿಕೊಳ್ಳುತ್ತಿರುತ್ತಾರೆ. ಈಗ ಇವರ ಜಗಳ ಮಿತಿ ಮೀರಿದೆ. ಮಾತಿಗೆ ಮಾತು ಬೆಳೆದಿದೆ.
ಉತ್ತಮ ಹಾಗೂ ಕಳಪೆ ನೀಡುವಾಗ ಧನರಾಜ್ಗೆ ಮೋಕ್ಷಿತಾ ಕಳಪೆ ಪಟ್ಟ ನೀಡಿದರು. ತಂಡದಲ್ಲಿ ಇದ್ದುಕೊಂಡೇ ಅವರು ಬೆಂಬಲ ನೀಡಿಲ್ಲ ಎಂದು ಆರೋಪಿಸಿದರು. ‘ನಾವು ಕೆಲವು ಸಲಹೆ ಕೊಟ್ಟರೆ ಅದನ್ನು ತೆಗೆದುಕೊಳ್ಳುವುದಿಲ್ಲ’ ಎಂದು ಮೋಕ್ಷಿತಾ ಹೇಳಿದರು.ಆ ಬಳಿಕ ಧನರಾಜ್ ಅವರ ಸರದಿ ಬಂದಾಗ ಮೋಕ್ಷಿತಾ ವಿರುದ್ಧ ಹರಿಹಾಯ್ದರು. ಮೋಕ್ಷಿತಾ ಕಡೆಯಿಂದ ಯಾವುದೇ ಬೆಂಬಲ ಸಿಗುತ್ತಿರಲಿಲ್ಲ ಎಂದ ಧನರಾಜ್, ಅವರನ್ನು ಅಹಂಕಾರಿ ಎಂದು ಕರೆದರು.
ಮೋಕ್ಷಿತಾ ಜಗಳ ಆಡುವಾಗ ‘ಅರ್ಥ ಆಯ್ತಾ’ ಎಂಬ ಪದ ಬಳಕೆ ಮಾಡುತ್ತಾರೆ. ಧನರಾಜ್ ಅವರು ಕೂಡ ಇದೇ ಪದ ಬಳಕೆ ಮಾಡಿದ್ದಾರೆ. ತಮ್ಮ ವಾದ ಮುಗಿಸಿದ ಬಳಿಕ, ‘ಅರ್ಥ ಆಯ್ತಾ’, ‘ಅರ್ಥ ಆಯ್ತಾ’ ಎಂದು ಕೇಳಿದ್ದಾರೆ.