Tuesday, June 24, 2025
25.9 C
Bengaluru
Google search engine
LIVE
ಮನೆಸುದ್ದಿಶ್ರೀಗಂಧ ಚೋರ ಪೊಲೀಸರ ಅತಿಥಿ..!

ಶ್ರೀಗಂಧ ಚೋರ ಪೊಲೀಸರ ಅತಿಥಿ..!

ಆನೇಕಲ್ ಕಾಡಿನಲ್ಲಿ ಗಂಧದ ಮರ ಕಡಿಯಲು ಬಂದ ಗ್ಯಾಂಗ್ ಮೇಲೆ ಅರಣ್ಯಾಧಿಕಾರಿಗಳ ತಂಡ ದಾಳಿ ಮಾಡಿದೆ. ದಾಳಿ ವೇಳೆ ಓರ್ವ ಸಿಕ್ಕಿಬಿದ್ದು ಇನ್ನುಳಿದ ಆರು ಮಂದಿ ಪರಾರಿಯಾಗಿದ್ದಾರೆ.

ಸಿಕ್ಕಿಬಿದ್ದವನನ್ನು ತಮಿಳುನಾಡಿನ ಬೇರಿಕಿ ಬಳಿಯ ಸಿಂಗ್ಲಬಲ್ಲಿ ಗೇಟ್ ವಾಸಿ 26 ವರ್ಷದ ಪ್ರಸಾದ್ ಎಂದು ಗುರುತಿಸಲಾಗಿದೆ.
ಅವರೊಂದಿಗೆ ಬಂದಿದ್ದ ಇನ್ನುಳಿದ ಮುನಿಯಪ್ಪ, ಮುರುಗ, ಭೀಮಪ್ಪ, ಪುಟ್ಟಪ್ಪ, ಬೊಮ್ಮಪ್ಪ ಮತ್ತು ವೆಂಕಟೇಶ್ ಎಂದು ವಿಚಾರಣೆಯಲ್ಲಿ ಆರೋಪಿ ಬಾಯ್ಬಿಟ್ಟಿದ್ದಾನೆ.

ಗಂಧದ ಮರಗಳನ್ನು ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಬಷೀರ್ ಎಂಬಾತನಿಗೆ ಮಾರಾಟ ಮಾಡಲಾಗುತಿತ್ತು. 3-4 ತಿಂಗಳ ಹಿಂದೆ ಗಂಧದ ಬೇಟೆಗೆ ಬಂದಿದ್ದು ಬರೀಕೈಲಿ ವಾಪಸ್ಸಾಗಿದ್ದ ಕುರಿತು ತಿಳಿಸಿದ್ದಾನೆ.


ಅಲ್ಲದೆ ಬಸ್ಸಿನಲ್ಲಿ ಕಾಡಿನ ಅಂಚಿಗೆ ಬಂದಿದ್ದು ಈ ಮೊದಲು‌ ಮುನಿಯಪ್ಪ ಎಂಬುವವನು ಕಾಡಿನಲ್ಲಿ ಎಲ್ಲೆಲ್ಲಿ ಗಂಧದ ಮರಗಳಿವೆ ಎಂಬುವುದನ್ನು ತಲಾಷ್ ಮಾಡಿ ಸ್ಕೆಚ್ ರೂಪಿಸುತ್ತಿದ್ದ ಎನ್ನಲಾಗಿದೆ. ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ.

https://youtube.com/live/L45eRlSTTww
Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments