ವರ್ತೂರ್ ಸಂತೋಶ್ ಸೇರಿದಂತೆ ಹಲವರ ಮೇಲೆ, ಹೆಬ್ಬಾಳದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ದೂರು ನೀಡೆಲಾಗಿದೆ. ಇನ್ನು ಹಳ್ಳಿಕಾರ್ ತಳಿ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಆರೋಪ ಹಿನ್ನೆಲೆ, ವರ್ತೂರ್ ಸಂತೋಷ್ ಸೇರಿ ಹಲವರ ಮೇಲೆ ಕ್ರಮ ಜೆರುಗಿಸಬೇಕೆ ಎಂದು ದೊಡ್ಡಬಳ್ಳಾಪುರದ ಹಳ್ಳಿ ರೈತ ಅಂಬರೀಶ್ ದೂರು ಸಲ್ಲಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ವರ್ತೂರ್ ಸಂತೋಷ್, ಸಾಮಾಜಿಕ ಜಾಲತಾಣಗಳಲ್ಲಿ ವರ್ತೂರ್ ಸಂತೋಷ್ ಹಳ್ಳಿಕಾರ್ ತಳಿಗಳ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ.. ಕಳ್ಳಿಕಾರ್ ತಳಿಯಲ್ಲಿ ಸುಳಿಗಳ ಬಗ್ಗೆ ಪ್ರಸ್ತಾಪ ಮಾಡಿದ್ದು, ಬೇಡಿ ಸುಳಿ ಇದ್ದರೆ ಜೈಲಿಗೆ ಹೋಗ್ತಾರೆ, ಗುಂಡಿಗೆ ಸುಳಿ ಇದ್ದರೆ ಹಾರ್ಟ್ ಪ್ರಾಬ್ಲಂ ಆಗುತ್ತೆ, ಕೊಂಬುಗಳ ಮಧ್ಯೆ ಸುಳಿ ಇದ್ದರೆ ಮನೆಗಳಲ್ಲಿ ಜಗಳ ಆಗುತ್ತೆ ಎಂದು ಅಪಪ್ರಚಾಋ ಮಾಡ್ತಿದ್ದಾರೆ ಆದ್ದರಿಂದ ಸಂತೋಷ್ ವಿರುದ್ಧ ಕ್ರ ಜರುಗಿಸಿ ಎಂದು ಆಗ್ರಹಿಸಿ ದೂರು ದಾಖಲು ಮಾಡಿದ್ದಾರೆ…