
ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮುಂದುವರೆದಿದ್ದು, ಬಿಜೆಪಿಗೆ ಅಡ್ಡಮತದಾನದ ಭೀತಿ ಎದುರಾಗಿದೆ.
ಕಾರಣ ಮಾಜಿ ಮಂತ್ರಿ, ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ತಮ್ಮ ಮತವನ್ನು ಪಕ್ಷದ ಸೂಚನೆ ಪ್ರಕಾರ ಚಲಾಯಿಸಿದ್ದಾರಾ? ಅಥ್ವಾ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದ್ದಾರಾ ಎನ್ನುವುದು ಖಚಿತವಾಗುತ್ತಿಲ್ಲ.
ಮತಚಲಾಯಿಸಲು ವಿಧಾನಸೌಧಕ್ಕೆ ಆಗಮಿಸಿದ್ದ ಎಸ್ಟಿ ಸೋಮಶೇಖರ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದ್ರೆ, ಆತ್ಮಸಾಕ್ಷಿಗೆ ಅನುಗುಣವಾಗಿ ಮತಚಲಾಯಿಸಿದ್ದೇನೆ ಎಂದಷ್ಟೇ ಹೇಳಿ ಮುಂದೆ ಸಾಗಿದ್ದಾರೆ. ಮತಚಲಾಯಿಸಿ ವಾಪಸ್ ಬರುವಾಗಲೇ ಎಸ್ ಟಿ ಸೋಮಶೇಖರ್ ಅವರದ್ದು ಅದೇ ಉತ್ತರವಾಗಿತ್ತು.
ಅಲ್ಲದೇ, ವಿಧಾನಸೌಧದಲ್ಲಿರುವ ಬಿಜೆಪಿ ಕಚೇರಿ ಕಡೆಯೂ ಎಸ್ ಟಿ ಸೋಮಶೇಖರ್ ಕಣ್ಣೆತ್ತಿಯೂ ನೋಡಲಿಲ್ಲ.
ಬಿಜೆಪಿ ಸಚೇತಕ ದೊಡ್ಡನಗೌಡ ಪಾಟೀಲ್ ವ್ಹಿಪ್ ನೀಡಲು ಹೋದರೂ ಎಸ್ಟಿ ಸೋಮಶೇಖರ್ ಅದನ್ನು ಸ್ವೀಕಾರ ಮಾಡಲಿಲ್ಲ.
ಲಿಫ್ಟ್ನಲ್ಲಿ ಜೊತೆಯಾದ ಹೆಚ್ಡಿ ರೇವಣ್ಣ ಅವರು ಕೆದಕಿದಾಗಲೂ, ಯಾರಿಗೆ ಮತ ಹಾಕಿದೆ ಎಂಬುದರ ಗುಟ್ಟನ್ನು ಎಸ್ಸಿ ಸೋಮಶೇಖರ್ ಬಿಟ್ಟುಕೊಡಲಿಲ್ಲ
ಈ ಬೆಳವಣಿಗೆ ಬಿಜೆಪಿಗೆ ಅಡ್ಡಮತದಾನದ ಆತಂಕ ತಂದೊಡ್ಡಿದೆ. ಮತ ಎಣಿಕೆ ನಂತರ ಎಸ್ಟಿ ಸೋಮಶೇಖರ್ ಆತ್ಮಸಾಕ್ಷಿ ಮತದ ಗುಟ್ಟು ಅನಾವರಣಗೊಳ್ಳಲಿದೆ.




