keralaರಾಜಕೀಯ

ಕೇರಳದಲ್ಲಿ ಯುಡಿಎಫ್ ಯುಗ – ವಿ.ಡಿ. ಸತೀಶನ್ ಸಂಪುಟದಲ್ಲಿ 20 ಸಚಿವರು

Kerala New government Cabinet Ministers

ತಿರುವನಂತಪುರ: ಕೇರಳ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಸರ್ಕಾರ ರಚನೆಯಾಗಿದ್ದು ವಿ.ಡಿ. ಸತೀಶನ್ ಅವರು ನೂತನ ಮುಖ್ಯಮಂತ್ರಿಯಾಗಿ ಗದ್ದುಗೆಗೇರಿದರು. ಈ ವಿನೂತನ ಸಂಪುಟದಲ್ಲಿ ಹಳೆಯ ಅನುಭವ ಮತ್ತು ಹೊಸ ಉತ್ಸಾಹದ ಸಮ್ಮಿಲನ ಕಂಡುಬಂದಿದೆ.

ನೂತನ ಸಚಿವ ಸಂಪುಟ
ವಿ.ಡಿ. ಸತೀಶನ್ ನೇತೃತ್ವದ ಸಂಪುಟದಲ್ಲಿ ಒಟ್ಟು 20 ಸಚಿವರು ಇರಲಿದ್ದು, ಈ ಪೈಕಿ 14 ಮಂದಿ ಹೊಸಬರಿಗೆ ಅವಕಾಶ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಅಚ್ಚರಿ ಮೂಡಿಸಿದೆ. ತಮಿಳುನಾಡಿನ ಹೆಚ್ಚುವರಿ ಉಸ್ತುವಾರಿ ಹೊಂದಿರುವ ರಾಜ್ಯಪಾಲ ಆರ್.ವಿ. ಅರ್ಕ್ಲೇಕರ್ ಅವರಿಗೆ ಸಚಿವರ ಪಟ್ಟಿಯನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಹಿರಿಯ ನಾಯಕರಾದ ರಮೇಶ್ ಚೆನ್ನಿತ್ತಲ ಅವರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ನೂತಸ ಸಚಿವ ಸಂಪುಟದಲ್ಲಿ 20 ಸಚಿವರು

ಕ್ರಮ ಸಂಖ್ಯೆಸಚಿವರ ಹೆಸರುಪಕ್ಷ
1ವಿ.ಡಿ. ಸತೀಶನ್ (ಮುಖ್ಯಮಂತ್ರಿ)ಕಾಂಗ್ರೆಸ್
2ರಮೇಶ್ ಚೆನ್ನಿತ್ತಲಕಾಂಗ್ರೆಸ್
3ಸನ್ನಿ ಜೋಸೆಫ್ಕಾಂಗ್ರೆಸ್
4ಕೆ. ಮುರಳೀಧರನ್ಕಾಂಗ್ರೆಸ್
5ಪಿ.ಸಿ. ವಿಷ್ಣುನಾಥ್ಕಾಂಗ್ರೆಸ್
6ಎ.ಪಿ. ಅನಿಲ್ ಕುಮಾರ್ಕಾಂಗ್ರೆಸ್
7ರೋಜಿ ಎಂ. ಜಾನ್ಕಾಂಗ್ರೆಸ್
8ಟಿ. ಸಿದ್ದೀಕ್ಕಾಂಗ್ರೆಸ್
9ಬಿಂದು ಕೃಷ್ಣಕಾಂಗ್ರೆಸ್
10ಎಂ. ಲಿಜುಕಾಂಗ್ರೆಸ್
11ಓ.ಜೆ. ಜನೀಶ್ಕಾಂಗ್ರೆಸ್
12ಕೆ.ಎ. ತುಳಸಿಕಾಂಗ್ರೆಸ್
13ಪಿ.ಕೆ. ಕುಂಹಾಲಿಕುಟ್ಟಿಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML)
14ಪಿ.ಕೆ. ಬಶೀರ್ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML)
15ಕೆ.ಎಂ. ಶಾಜಿಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML)
16ಎನ್. ಶಂಸುದ್ದೀನ್ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML)
17ವಿ.ಇ. ಅಬ್ದುಲ್ ಗಫೂರ್ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML)
18ಮೊನ್ಸ್ ಜೋಸೆಫ್ಕೇರಳ ಕಾಂಗ್ರೆಸ್
19ಅನೂಪ್ ಜೇಕಬ್ಕೇರಳ ಕಾಂಗ್ರೆಸ್
20ಶಿಬು ಬೇಬಿ ಜಾನ್ರೆವಲ್ಯೂಷನರಿ ಸೋಶಿಯಲಿಸ್ಟ್ ಪಾರ್ಟಿ

ಮಿತ್ರಪಕ್ಷಗಳ ಪಾಲುದಾರಿಕೆ
ಯುಡಿಎಫ್ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಈ ಬಾರಿ 5 ಸಚಿವ ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪಿ.ಕೆ. ಕುನ್ಹಾಲಿಕುಟ್ಟಿ, ಕೆ.ಎಂ. ಶಾಜಿ, ವಿ. ಅಬ್ದುಲ್ ಗಫೂರ್, ಎನ್. ಶಂಸುದ್ದೀನ್ ಮತ್ತು ಪಿ.ಕೆ. ಬಶೀರ್ ಇವರು IUML ನೂತನ ಸಚಿವರುಗಳಾಗಿದ್ದಾರೆ.ಇತರ ಮಿತ್ರಪಕ್ಷಗಳಿಂದ ಕೇರಳ ಕಾಂಗ್ರೆಸ್‌ನಿಂದ ಮಾನ್ಸ್ ಜೋಸೆಫ್ ಮತ್ತು ಅನೂಪ್ ಜಾಕೋಬ್, ಆರ್‌ಎಸ್‌ಪಿಯಿಂದ ಶಿಬು ಬೇಬಿ ಜಾನ್ ಹಾಗೂ ಸಿಎಂಪಿ ಪಕ್ಷದಿಂದ ಸಿ.ಪಿ. ಜಾನ್ ಸಂಪುಟ ಸೇರಲಿದ್ದಾರೆ.

ಸರಳತೆಗೆ ಆದ್ಯತೆ- ಸತೀಶನ್ ಹೊಸ ಆದೇಶ!
ಇಂಧನ ಉಳಿತಾಯ ಮತ್ತು ಸಾರ್ವಜನಿಕ ಹಣ ಪೋಲಾಗುವುದನ್ನು ತಡೆಯಲು ನೂತನ ಸಿಎಂ ವಿ.ಡಿ. ಸತೀಶನ್ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದಾರೆ. ಕೇಂದ್ರದ ಸಲಹೆಯಂತೆ, ಸಚಿವರ ಸಂಚಾರದ ವೇಳೆ ಯಾವುದೇ ಬೆಂಗಾವಲು ವಾಹನಗಳು, ಭದ್ರತಾ ವಾಹನಗಳು ಅಥವಾ ಆಂಬ್ಯುಲೆನ್ಸ್‌ಗಳು ಇರಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ,ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಹಿಮಾಚಲ ಸಿಎಂ ಸುಖವಿಂದರ್ ಸುಖು,ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು.

#FreedomTV #KeralaPolitics #VDSatheesan #UDFGovernment #KeralaCabinet #RahulGandhi #Congress #IUML #BreakingNews #KeralaNewCM #PoliticalUpdate

Comments (0)

Your email address will not be published. Required fields are marked *

Back to top button