ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮುಂದಿನ ಸೀಸನ್ ನಿರೂಪಣೆಯಿಂದ ಕಿಚ್ಚ ಸುದೀಪ್ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಬಿಗ್ ಬಾಸ್ ಸೀಸನ್ 11ಕ್ಕೆ ಉತ್ತಮ ಟಿಆರ್ಪಿ ಬಂದ ಬೆನ್ನಲ್ಲೇ ಸುದೀಪ್ ಈ ಮಾಹಿತಿ ಹಂಚಿಕೊಂಡಿದ್ದಾರೆ. ‘ಬಿಗ್ ಬಾಸ್ 11ಕ್ಕೆ ಹಾಗೂ ನನಗೆ ವೀಕ್ಷಕರು ತೋರಿದ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ.
ಈ 11 ವರ್ಷಗಳ ಪಯಣ ಸ್ಮರಣೀಯವಾದದ್ದು. ಈಗ ನಾನು ಮಾಡಬೇಕಾದ ಕೆಲಸದ ಕಡೆ ಸಾಗ ಬೇಕಾಗಿದೆ. ಬಿಗ್ ಬಾಸ್ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್. ನನ್ನ ಈ ನಿರ್ಧಾರವನ್ನು ಕಲರ್ಸ್ ವಾಹಿನಿ ಹಾಗೂ ಬಿಗ್ಬಾಸ್ ವೀಕ್ಷಕರು ಗೌರವಿ ಸುತ್ತಾರೆ ಎಂದು ಭಾವಿಸಿರುವೆ.
ಈ ಸೀಸನ್ ಉತ್ತಮವಾಗಿಸಿ, ಪ್ರೇಕ್ಷಕರನ್ನು ರಂಜಿಸಲು ಶ್ರಮಿ ಸುವೆ. ಎಲ್ಲರಿಗೂ ಪ್ರೀತಿಯ ವಂದನೆಗಳು’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ 11ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಅವರ ನಿರೂಪಣೆ ಬಗ್ಗೆ ಹಲವು ಗೊಂದಲ ಎದ್ದಿದ್ದವು.. ಈಗ ಅವರಿಂದಲೇ ಸ್ಪಷ್ಟನೆ ದೊರಕಿದೆ.