ನನ್ನ ಬ್ಯಾಂಕ್ ಬ್ಯಾಲೆನ್ಸ್ ನನಗೇ ಗೊತ್ತಿಲ್ಲ: ಪತ್ನಿ ಆರತಿ ಬಗ್ಗೆ ಶಿವಕಾರ್ತಿಕೇಯನ್ ಭಾವುಕ ನುಡಿ

ಮಿಳು ಚಿತ್ರರಂಗದ ‘ಪ್ರಿನ್ಸ್’ ಎಂದೇ ಖ್ಯಾತರಾದ ಶಿವಕಾರ್ತಿಕೇಯನ್, ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನ ಮತ್ತು ಹಣಕಾಸಿನ ನಿರ್ವಹಣೆಯ ಬಗ್ಗೆ ಕುತೂಹಲಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ರಾಧಿಕಾ ಶರತ್ಕುಮಾರ್ ಅಭಿನಯದ, ತಾವೇ ನಿರ್ಮಿಸಿದ ‘ತೈಕಿಳವಿ’ (ಥಾಯ್ ಕುಲವಿ) ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ.

ಶಿವಕಾರ್ತಿಕೇಯನ್ ಅವರ ಪ್ರಕಾರ, ಅವರು ಮದುವೆಯಾದ ದಿನದಿಂದಲೂ ಮನೆಯ ಎಲ್ಲಾ ಆದಾಯ ಮತ್ತು ಖರ್ಚುಗಳನ್ನು ಅವರ ಪತ್ನಿ ಆರತಿ ಅವರೇ ನಿರ್ವಹಿಸುತ್ತಿದ್ದಾರೆ. “ನನ್ನ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ನನಗೇ ತಿಳಿದಿಲ್ಲ. ನನ್ನ ಯಾವುದೇ ಅಗತ್ಯಗಳಿಗಾಗಿ ನಾನು ಆರತಿಯನ್ನೇ ಕೇಳುತ್ತೇನೆ. ಅವಳು ಎಲ್ಲವನ್ನೂ ಅಚ್ಚುಕಟ್ಟಾಗಿ ನೋಡಿಕೊಳ್ಳುವುದರಿಂದಲೇ ನಾನು ಸಿನಿಮಾಗಳ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿದೆ,” ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಚಿತ್ರದಲ್ಲಿ ರಾಧಿಕಾ ಅವರು ನಿರ್ವಹಿಸಿರುವ ‘ಪಾವುನುತೈ’ ಎಂಬ ಗಟ್ಟಿಗಿತ್ತಿ ಪಾತ್ರವನ್ನು ನೋಡಿ ಶಿವಕಾರ್ತಿಕೇಯನ್ ತಮ್ಮ ಜೀವನದ ಮೂವರು ಪ್ರಮುಖ ಮಹಿಳೆಯರನ್ನು ಸ್ಮರಿಸಿದ್ದಾರೆ. ತಂದೆ ನಿಧನರಾದಾಗ 17 ವರ್ಷದ ಶಿವಕಾರ್ತಿಕೇಯನ್ ಮತ್ತು ಅವರ ಸಹೋದರಿಯನ್ನು ಸಾಕಿ, ಓದಿಸಿ, ಮದುವೆ ಮಾಡಿದ ಧೀಮಂತ ಮಹಿಳೆ.

ಮದುವೆ ಮತ್ತು ಇಬ್ಬರು ಮಕ್ಕಳ ನಂತರವೂ ಎಂ.ಡಿ ಓದಿ ಚಿನ್ನದ ಪದಕ ಗೆದ್ದ ಸಾಧಕಿ. ಕುಟುಂಬದ ಆರ್ಥಿಕ ಭದ್ರತೆಯನ್ನು ಕಾಯುತ್ತಿರುವ ಶಕ್ತಿ.”ಹೋರಾಡಲು ಮತ್ತು ರಕ್ಷಿಸಲು ಪುರುಷ ದೇವರುಗಳನ್ನು ಪೂಜಿಸುವ ನಾವು, ವಿದ್ಯೆ ಮತ್ತು ಸಂಪತ್ತಿಗಾಗಿ ಸ್ತ್ರೀ ದೇವರುಗಳನ್ನು ಪೂಜಿಸುತ್ತೇವೆ. ಈ ಸತ್ಯವನ್ನು ನಾನು ಮೊದಲೇ ಅರಿತುಕೊಂಡಿದ್ದೇನೆ,” ಎಂಬ ಸಿನಿಮಾದ ಸಂಭಾಷಣೆಯನ್ನು ಅವರು ಉಲ್ಲೇಖಿಸಿದ್ದಾರೆ.
ದೊಡ್ಡ ತಾರಾಗಣವಿಲ್ಲದಿದ್ದರೂ, ಕೇವಲ ಕಥೆಯ ಬಲದಿಂದ ‘ತೈಕಿಳವಿ’ ಚಿತ್ರ 50 ಕೋಟಿ ಕ್ಲಬ್ ಸೇರಿರುವುದು ವಿಶೇಷ. ಶಿವಕಾರ್ತಿಕೇಯನ್ ಅವರ ಈ ಪ್ರಾಮಾಣಿಕ ಮಾತುಗಳು ಅಭಿಮಾನಿಗಳ ಹೃದಯ ಗೆದ್ದಿದ್ದು, ಹಣಕಾಸಿನ ವಿಚಾರದಲ್ಲಿ ಅವರು ಪತ್ನಿಯ ಮೇಲಿಟ್ಟಿರುವ ಅಚಲ ನಂಬಿಕೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.




