Top Newsದೇಶ/ವಿದೇಶ

ಉಪರಾಷ್ಟ್ರಪತಿ ಚುನಾವಣೆಗೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ದೆಹಲಿ: ಉಪರಾಷ್ಟ್ರಪತಿ ಆಯ್ಕೆ ಸಂಬಂಧ ಸೆಪ್ಟೆಂಬರ್​ 9ರಂದು ಚುನಾವಣೆ ನಡೆಸುವುದಾಗಿ ಚುನಾವಣೆ ಆಯೋಗ ಘೊಷಣೆ ಮಾಡಿದೆ.

ಜಗದೀಪ್​ ಧನಕರ್​ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಹೊಸ ಅಭ್ಯರ್ಥಿಗಳು ಆಯ್ಕೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಉಪರಾಷ್ಟ್ರಪತಿ ಚುನಾವಣೆಗೆ ಗುರುವಾರವಷ್ಟೇ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿತ್ತು.

ಧನಕರ್​ ಅವರು  ಜುಲೈ 21 ರಂದು ಹಠಾತ್ ರಾಜೀನಾಮೆಯಿಂದ ಉಪರಾಷ್ಟ್ರಪತಿ ಚುನಾವಣೆ ಅನಿವಾರ್ಯವಾಯಿತು. ಇದು ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಅಪರೂಪದ ಮಧ್ಯಂತರ ಖಾಲಿ ಹುದ್ದೆಗೆ ಕಾರಣವಾಯಿತು.  ಇನ್ನೂ 2 ವರ್ಷ ಧನಕರ್​ ಅವರ ಅಧಿಕಾರಾವಧಿ ಇತ್ತು.

ಚುನಾವಣಾ ಪ್ರಕ್ರಿಯೆ ಹೇಗೆ..?
ಆಗಸ್ಟ್​ 7 ರಂದು ಚುನಾವಣಾ ಆಯೋಗದ ಅಧಿಸೂಚನೆಯ ಪ್ರಕಟಣೆ
ಆಗಸ್ಟ್ 21 ರಂದು ನಾಮನಿರ್ದೇಶನ ಸಲ್ಲಿಸಲು ಕೊನೆಯ ದಿನಾಂಕ
ಆಗಸ್ಟ್ 22 ರಂದು ನಾಮಪತ್ರಗಳ ಪರಿಶೀಲನೆಗೆ ದಿನಾಂಕ
ಆಗಸ್ಟ್ 25ರಂದು  ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ
ಸೆಪ್ಟೆಂಬರ್​ 09 ಮತದಾನದ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ
ಸೆಪ್ಟೆಂಬರ್​ 09 ಮತ ಎಣಿಕೆ ಕಾರ್ಯ

Comments (0)

Your email address will not be published. Required fields are marked *

Back to top button