ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಕೆಎಂಎಫ್ನ ನಂದಿನಿ ತುಪ್ಪಕ್ಕೆ ಮತ್ತೆ ಬೇಡಿಕೆ ಹೆಚ್ಚಾಗಿದೆ.
ತಿರುಪತಿಯಲ್ಲಿ ಈ ಹಿಂದೆ ಬೇರೆ ತುಪ್ಪ ಬಳಸಿ ಲಡ್ಡು ಪ್ರಸಾದ ತಯಾರಿಸುತ್ತಿದ್ದರು. ಆದರೆ ಇದೀಗ ಲಡ್ಡು ತಯಾರಿಕೆಗೆ ಕೆಎಂಎಫ್ನ ನಂದಿನಿ ತುಪ್ಪಕ್ಕೆ ಬಹುಬೇಡಿಕೆ ಇದೆ. ಇನ್ನೇನು ಯುಗಾದಿ ಹಬ್ಬ ಸಮೀಪಿಸುತ್ತಿದೆ. ಈ ಹಿನ್ನಲೇಯಲ್ಲಿ ಲಡ್ಡು ತಯಾರಿಕೆಗೆ 2 ಸಾವಿರ ಟನ್ ತುಪ್ಪವನ್ನು ಕಳಿಸಬೇಕೆಂದು ಕೆಎಂಎಫ್ಗೆ ಟಿಟಿಡಿ ಸೂಚನೆ ನೀಡಿದೆ.
ಸತತವಾಗಿ ಕೆಎಂಎಫ್ ನಂದಿನಿಗೆ ಮಾತ್ರ ಟಿಟಿಡಿ ಟೆಂಡರ್ ಕೊಡುತ್ತಿದೆ. ಈ ಮೊದಲು ತಿಮ್ಮಪ್ಪನ ಸನ್ನಿಧಾನಕ್ಕೆ ಎರಡು ದಿನಕ್ಕೆ ಒಮ್ಮೆ ತುಪ್ಪ ರವಾನೆಯಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿ ದಿನವೂ ತುಪ್ಪ ರವಾನೆಯಾಗುತ್ತಿದೆ. ಈ ವರ್ಷ 5 ಸಾವಿರ ಟನ್ ತುಪ್ಪವನ್ನು ರವಾನಿಸುವಂತೆ ಟಿಟಿಡಿ ಕೆಎಂಎಫ್ಗೆ ಬೇಡಿಕೆ ಇಟ್ಟಿದ್ದು, ಈಗಾಗಲೇ 600 ಟನ್ ತುಪ್ಪ ಕಳುಹಿಸಿಕೊಡಲಾಗಿದೆ.
ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ನಿರಂತರವಾಗಿ ನಂದಿನಿ ತುಪ್ಪವನ್ನು ರವಾನಿಸಲಾಗುತ್ತಿತ್ತು. ಆದ್ರೆ ಈ ಹಿಂದಿನ ಸರ್ಕಾರದ ಲಡ್ಡು ತಯಾರಿಕೆಗೆ ಬೇರೆ ಬ್ರ್ಯಾಂಡ್ ತುಪ್ಪ ಬಳಸಲಾಗುತ್ತಿತ್ತು. ಬಳಿಕ ಆ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವಿದೆ ಎಂದು ಭಾರಿ ವಿವಾದಕ್ಕೆ ಗುರಿಯಾಗಿತ್ತು.