#Exclusive NewsTop Newsಸಿನಿಮಾಸುದ್ದಿ

ಅಲ್ಲು ಅರ್ಜುನ್ ಬೆಂಬಲಕ್ಕೆ ನಿಂತ ಟಾಲಿವುಡ್ ನಟರು

ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆ ಆಗಿ ಬಂದ ದಿನ ಅಂದರೆ ನಿನ್ನೆ (ಡಿಸೆಂಬರ್ 14) ಹಲವಾರು ಮಂದಿ ಸಿನಿಮಾ ಸೆಲೆಬ್ರಿಟಿಗಳು ಅಲ್ಲು ಅರ್ಜುನ್ ನಿವಾಸಕ್ಕೆ ಭೇಟಿ ನೀಡಿದ್ದರು. ನಟ ಉಪೇಂದ್ರ ಸಹ ಅವರಲ್ಲಿ ಒಬ್ಬರು. ಲಹರಿ ವೇಲು ಸಹ ಜೊತೆಗಿದ್ದರು.

ನಟ ವೆಂಕಟೇಶ್ ಅವರು ಅಲ್ಲು ಅರ್ಜುನ್ ನಿವಾಸಕ್ಕೆ ಭೇಟಿ ನೀಡಿ ನಟನ ಯೋಗ ಕ್ಷೇಮ ವಿಚಾರಿಸಿದರು. ವೆಂಕಟೇಶ್ ಹಾಗೂ ಅಲ್ಲು ಅರ್ಜುನ್ ಬಹಳ ವರ್ಷಗಳಿಂದಲೂ ಆತ್ಮೀಯರು. ಇಬ್ಬರ ಮನೆ ಸಹ ಹತ್ತಿರದಲ್ಲೇ ಇದೆ.

 

‘ಪುಷ್ಪ’ ಸಿನಿಮಾದ ನಿರ್ದೇಶಕ, ಅಲ್ಲು ಅರ್ಜುನ್​ರ ಅತ್ಯಂತ ಆಪ್ತ ಗೆಳೆಯ ಸುಕುಮಾರ್ ಸಹ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ್ದರು. ಅಂದಹಾಗೆ ಮೆಗಾಸ್ಟಾರ್ ಚಿರಂಜೀವಿ, ಅವರ ಪತ್ನಿ ಸುರೇಖಾ ಅವರು  ಸಹ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ್ದರು. ಸುರೇಖಾರ ಅಣ್ಣನ ಮಗನೇ ಅಲ್ಲು ಅರ್ಜುನ್.

ಅಲ್ಲು ಅರ್ಜುನ್ ಮನೆಗೆ ಖ್ಯಾತ ನಿರ್ಮಾಪಕ ದಿಲ್ ರಾಜು ಸಹ ಭೇಟಿ ನೀಡಿದ್ದರು. ಅಲ್ಲು ಅರ್ಜುನ್ ಅನ್ನು ಸ್ಟಾರ್ ಮಾಡಿದ ಆರ್ಯ ಸಿನಿಮಾದ ನಿರ್ಮಾಪಕ.

ಹಿರಿಯ ನಿರ್ದೇಶಕ, ನಿರ್ಮಾಪಕ ರಾಘವೇಂದ್ರ ಅವರು ಸಹ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ್ದರು. ಹಿರಿಯರಾಗಿದ್ದರೂ ಸಹ ಖುದ್ದಾಗಿ ಬಂದು ಅಲ್ಲು ಅರ್ಜುನ್ ಅನ್ನು ಭೇಟಿಯಾದರು. ಅವರ ತಂದೆ ಅಲ್ಲು ಅರವಿಂದ್ ಅವರನ್ನೂ ಭೇಟಿ ಆದರು.

ವಿಜಯ್ ದೇವರಕೊಂಡ ಮತ್ತು ಆನಂದ್ ದೇವರಕೊಂಡ ಅವರುಗಳು ಅಲ್ಲು ಅರ್ಜುನ್ ನಿವಾಸಕ್ಕೆ ಭೇಟಿ ನೀಡಿದ್ದರು. ವಿಜಯ್ ದೇವರಕೊಂಡಗೆ ಅಲ್ಲು ಅರ್ಜುನ್ ಮೇಲೆ ವಿಶೇಷ ಪ್ರೇಮ. ವಿಜಯ್ ನಟಿಸಲಿರುವ ಮುಂದಿನ ಸಿನಿಮಾಕ್ಕೆ ಅಲ್ಲು ಅರ್ಜುನ್ ಅವರದ್ದೇ ಬಂಡವಾಳ..

ಮಂಚು ಕುಟುಂಬದಲ್ಲಿ ವಿವಾದಗಳು ನಡೆಯುತ್ತಿವೆ ಇದರ ನಡುವೆಯೂ ಮಂಚು ವಿಷ್ಣು, ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿ ನಟನನ್ನು ಮಾತನಾಡಿಸಿದ್ದಾರೆ. ಮಂಚು ವಿಷ್ಣು, ಮಾ (ಕಲಾವಿದರ ಸಂಘ)ದ ಅಧ್ಯಕ್ಷರು ಸಹ ಆಗಿರುವ ಕಾರಣ ಅವರು ಭೇಟಿ ಮಾಡಿದ್ದಾರೆ.

ನಟ ರಾಜಕಾರಣಿಗಳಾದ ರಾಜಶೇಖರ್ ಮತ್ತು ಅವರ ಪತ್ನಿ ವಿಜೇತ ಅವರುಗಳು ಸಹ ಅಲ್ಲು ಅರ್ಜುನ್ ಅನ್ನು ಭೇಟಿಯಾದರು. ಅಸಲಿಗೆ ರಾಜಶೇಖರ್ ಮತ್ತು ಚಿರಂಜೀವಿ ಕುಟುಂಬದ ನಡುವೆ ಸಂಬಂಧ ಅಷ್ಟಾಗಿ ಸರಿಯಿಲ್ಲದಿದ್ದರೂ ಇಬ್ಬರೂ ಬಂದಿದ್ದರು

Comments (0)

Your email address will not be published. Required fields are marked *

Back to top button