ಆಯುಷ್ಯ ಗಟ್ಟಿ ಇದ್ರೆ ಬಂಡೆ ಮೈಮೇಲೆ ಬಿದ್ರೂ ಬದುಕುತ್ತಾರೆ ಅನ್ನೋ ಮಾತಿದೆ. ಸಾವು ಅನ್ನೋದು ಇನ್ನೂ ಹತ್ತಿರ ಬಂದಿಲ್ಲ ಅಂದರೆ ಆಕಾಶದಿಂದ ಬಿದ್ದರೂ ಬದುಕುತ್ತಾರೆ. ಬೆಂಕಿಯಲ್ಲಿ ಬಿದ್ದರೂ ಬದುಕುತ್ತಾರೆ ಅನ್ನೋದಕ್ಕೆ ಒಂದು ಜೀವಂತ ಉದಾಹರಣೆ ಇಲ್ಲಿದೆ.
ಗುಜರಾತ್ನ ಅಹಮದಾಬಾದ್ನಿಂದ ಲಂಡನ್ಗೆ 242 ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ವಿಮಾನ ಟೇಕಾಫ್ ಆದೆ 20 ಸೆಕೆಂಡ್ನಲ್ಲೇ ನೆಲಕ್ಕೆ ಅಪ್ಪಳಿಸಿ ಧ್ವಂಸಗೊಂಡಿತ್ತು. ಇದಲ್ಲಿದ್ದ 241 ಪ್ರಯಾಣಿಕರು ಜೀವಂತ ಸುಟ್ಟು ಕರಕಲಾಗಿದ್ದರೆ. ಆ ಒಬ್ಬನೇ ಒಬ್ಬ ಯುವಕ ಮಾತ್ರ ಸಾವನ್ನೇ ಗೆದ್ದಿದ್ದಾನೆ.
ಅಪಘಾತದ ಸಮಯದಲ್ಲಿ ಏನಾಗುತ್ತಿದೆ ಎಂದು ತಿಳಿಯೋಷ್ಟರಲ್ಲೇ ಸಾವು ಬಂದಪ್ಪಳಿಸಿರುತ್ತದೆ. ಅದರಲ್ಲೂ ವಿಮಾನ ಅಪಘಾತದ ಸಮಯದಲ್ಲಿ ಏನನ್ನೂ ಊಹಿಸಲೂ ಸಾಧ್ಯವಿರಲ್ಲ. ಮೇಲಿಂದ ಬೀಳುತ್ತಿರುವ ವಿಮಾನದಿಂದ ಬಚಾವಾಗೋದು ಕೂಡ ಅಸಾಧ್ಯದ ಮಾತೇ ಸರಿ. ಆದರೂ ವಿಮಾನದಲ್ಲಿದ್ದ ಒಬ್ಬ ಯುವಕ ಸಾವನ್ನು ಜಯಿಸಿದ್ದಾನೆ.
ಭಾರತೀಯ ಮೂಲದ ಲಂಡನ್ ನಿವಾಸಿ 39 ವರ್ಷದ ವಿಶ್ವಾಸ್ ಕುಮಾರ್ ರಮೇಶ್ ಅವರೇ ಇಡೀ ಜಗತ್ತಿನ ಏಕೈಕ ಅದೃಷ್ಟಶಾಲಿ ಮನುಷ್ಯ. ಅಹಮದಾಬಾದ್ನಿಂದ ಏರ್ ಇಂಡಿಯಾದ ಬೋ Boeing 787-8 Dreamliner ವಿಮಾನದಲ್ಲಿ 241 ಜನರ ಜೊತೆಗೆ ತಾನೂ ಕೂಡ ಪ್ರಯಾಣಿಸಿದ್ದರು. ವಿಮಾನ ಟೇಕಾಫ್ ಆದ 20 ಸೆಕೆಂಡ್ನಲ್ಲೇ ಭಾರಿ ದೊಡ್ಡ ಸದ್ದು ಕೇಳಿಸಿದೆ. ಇದರ ಜೊತೆಗೆ ವಿಮಾನದ ಪೈಲಟ್ ಮೇಡೇ ಕರೆ ಕೊಟ್ಟಿದ್ದರು. ಆತ ಉಳಿದ ಪ್ರಯಾಣಿಕರಂತೆ ಚೀರುತ್ತಾ ಕೂರಲಿಲ್ಲ. ಆತ ಒಂದೇ ಒಂದು ಕ್ಷಣ ತಡ ಮಾಡಿದ್ದರೂ ಉಳಿದ ಪ್ರಯಾಣಿಕರಂತೆ ತಾನೂ ಕೂಡ ಸುಟ್ಟು ಕರಕಲಾಗಬೇಕಿತ್ತು. ಆದರೆ ಆತನ ಸಮಯ ಪ್ರಜ್ಞೆಯೇ ಆತನನ್ನು ಉಳಿಸಿದೆ.
ವಿಮಾನ ಅಪ್ಪಳಿಸಲು ತೆಗೆದುಕೊಂಡ ಸಮಯ ಕೇವಲ 22 ಸೆಕೆಂಡ್ ಮಾತ್ರ. ಆ ಕಡೇ ಕ್ಷಣದಲ್ಲೇ ವಿಶ್ವಾಸ್ ಕುಮಾರ್ ರಮೇಶ್, ವಿಮಾನದ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆರೆದು ಅಲ್ಲಿಂದ ಧುಮುಕಿಬಿಟ್ಟಿದ್ದಾನೆ.. ಸ್ವಲ್ಪವೇ ಗಾಯಗಳಿಂದಾಗಿ ಆತ ಬದುಕುಳಿದುಬಿಟ್ಟಿದ್ದಾನೆ
ವಿಶ್ವಾಸ್ ಕುಮಾರ್ ರಮೇಶ್ಗೆ ಜೀವ ಕೊಟ್ಟಿದ್ದು ಸೀಟ್ ನಂ. 11A
ವಿಶ್ವಾಸ್ ಕುಮಾರ್ ರಮೇಶ್ ಜೀವ ಉಳಿಸಿಕೊಳ್ಳಲು ನೆರವಾಗಿದ್ದು ಸಮಯ ಪ್ರಜ್ಞೆ ಹಾಗೂ ಅವರು ಕೂತಿದ್ದ ಸೀಟ್ ನಂ.11A. ಈ ಸೀಟ್ ನಂ.11A ಇಲ್ಲಿ ರಮೇಶ್ ಪಾಲಿಗೆ ಜೀವ ಉಳಿಸಿದ ಸೀಟ್. ಏಕೆಂದರೆ ಈ ಸೀಟ್ ಎಮರ್ಜೆನ್ಸಿ ಎಕ್ಸಿಟ್ ಪಕ್ಕದಲ್ಲೇ ಇತ್ತು.
ವಿಮಾನದಲ್ಲಿ ತುರ್ತು ಸಂದರ್ಭಕ್ಕೆ ಅನುಕೂಲವಾಗಲೆಂದು ಎಮರ್ಜೆನ್ಸಿ ಎಕ್ಸಿಟ್ ಡೋರ್ಗಳು ಇರುತ್ತವೆ. ಇಂಥದ್ದೇ ಎಮರ್ಜೆನ್ಸಿ ಡೋರ್ ಪಕ್ಕ ಇದ್ದಿದ್ದೇ ಈ ಸೀಟ್ ನಂ.11A. ಬರೀ ಡೋರ್ ಪಕ್ಕ ಇದ್ದರಷ್ಟೇ ಸಾಲದು, ಸಮಯ ಪ್ರಜ್ಞೆಯೂ ಇರಬೇಕು. ಇದೇ ರೀತಿ ಇನ್ನೊಂದು ಬದಿಯೂ ಎಮರ್ಜೆನ್ಸಿ ಡೋರ್ ಇತ್ತು. ಆದರೆ ಆ ಸೀಟ್ನಲ್ಲಿ ಕೂತಿದ್ದ ಪ್ರಯಾಣಿಕ ಸಮಯ ಪ್ರಜ್ಞೆ ತೋರಿಲ್ಲ, ಬದುಕುವ ಅದೃಷ್ಟವೂ ಇರಲಿಲ್ಲ. ಹೀಗಾಗಿ ಆತ ಜೀವ ಬಿಟ್ಟಿದ್ದಾನೆ..ಆದರೆ ವಿಶ್ವಾಸ್ ಕುಮಾರ್ ರಮೇಶ್, ವಿಶ್ವಾಸಿ ಯುವಕ. ವಿಮಾನ ಇನ್ನು 5 ಸೆಕೆಂಡ್ನಲ್ಲಿ ನೆಲಕ್ಕೆ ಅಪ್ಪಳಿಸುತ್ತೆ ಅನ್ನೋದನ್ನು ಕಿಟಕಿಯಿಂದ ನೋಡಿದ್ದೇ ತಡ, ಹಿಂದೆ ಮುಂದೆ ಯೋಚಿಸದೆ ಎಮರ್ಜೆನ್ಸಿ ಡೋರ್ ಓಪನ್ ಮಾಡಿ ಕೆಳಕ್ಕೆ ಧುಮುಕಿಬಿಟ್ಟಿದ್ದಾನೆ.
ವಿಶ್ವಾಸ್ ಕಣ್ಣು ಬಿಟ್ಟಾಗ ಸುಟ್ಟ ಭೂದಿ, ಅವಶೇಷಗಳ ಮುಂದೆ ಬಿದ್ದಿದ್ದ.!
ಅದು ಕೆಲವೇ ಕ್ಷಣಗಳ ಹಿಂದಷ್ಟೇ ಟೇಕಾಫ್ ಆಗಿದ್ದ ವಿಮಾನ. ಎಲ್ಲರೂ ನಗು ನಗುತ್ತಾ ಖುಷಿಯಾಗಿ ವಿಮಾನದಲ್ಲಿ ಕೂತಿದ್ದರು. ಕಿಟಕಿ ಪಕ್ಕ ಕೂತಿದ್ದ ಹಲವರು ವಿಮಾನ ನಿಲ್ದಾಣ ಹಾಗೇ ರನ್ ವೇ ದೃಶ್ಯವನ್ನ ಕಣ್ತುಂಬಿಕೊಳ್ಳುತ್ತಾ ಕೂತಿದ್ದರು. 600 ಅಡಿಯಷ್ಟು ಎತ್ತರಕ್ಕೆ ಹಾರಿದ್ದ ವಿಮಾನ ಒಮ್ಮೆಲೇ ಕೆಳಕ್ಕೆ ಬಿದ್ದುಬಿಟ್ಟಿದೆ. 20 ಸೆಕೆಂಡ್ನಲ್ಲಿ ಇಡೀ ವಿಶ್ವದ ಅತಿ ದೊಡ್ಡ ದುರಂತವೇ ಅಲ್ಲಿ ಕಣ್ಮುಂದೆ ಆಗಿಹೋಗಿತ್ತು. ವಿಮಾನದಿಂದ 600 ಅಡಿ ಎತ್ತರದಿಂದ ಬಿದ್ದ ಯುವಕ ಕಟ್ಟಡವೊಂದಕ್ಕೆ ಅಪ್ಪಳಿಸಿ ಕೆಳಕ್ಕೆ ಬಿದ್ದಿದ್ದಾನೆ. ಆತ ಅಷ್ಟು ಎತ್ತರದಿಂದ ಬಿದ್ದರೂ ಕೊಂಚ ಪೆಟ್ಟಾಗಿತ್ತು. ಆತನ ತಲೆಗೆ ಪೆಟ್ಟು ಬಿದ್ದು ಕೂಡಲೇ ಮೂರ್ಛೆ ತಪ್ಪಿ ಹೋದ.. ಆದರೆ ಆತ ಕಣ್ಣು ಬಿಟ್ಟಾಗ ಇಡೀ ವಿಮಾನವೇ ಧಗ ಧಗಿಸಿ ಉರಿಯುತ್ತಿತ್ತು. ಹಲವರ ದೇಹಗಳು ಆಗಷ್ಟೇ ಬೆಂದು ಹೋಗುತ್ತಿದ್ದವು.
ಆದರೆ ಸಕಾಲಕ್ಕೆ ವಿಮಾನದಿಂದ ಹಾರಿದ ಆ ಯುವಕ ಮಾತ್ರ ಜೀವ ಉಳಿಸಿಕೊಂಡಿದ್ದ. ಇದಲ್ಲವೇ ಅದೃಷ್ಟ ಅಂದರೆ. ಇದೇ ಅಲ್ವಾ ಸಾವನ್ನು ಗೆಲ್ಲುವುದು ಅಂದರೆ.. ವಿಶ್ವಾಸ್ ಕುಮಾರ್ ಆತ್ಮವಿಶ್ವಾಸವೇ ಆತನ ಜೀವ ಉಳಿಸಿದೆ.