ತೆರವುಗೊಂಡಿದ್ದ 5 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯ ದಿನಾಂಕ ಘೋಷಣೆ ಮಾಡಿದ ಭಾರತೀಯ ಚುನಾವಣಾ ಆಯೋಗ.
ಗುಜರಾತ್ನ ಕಾಡಿ ವಿಧಾನ ಸಭಾ ಕ್ಷೇತ್ರ, ವಿಸವದರ್,ಕೇರಳದ ನಿಲಂಬುರ್, ಪಂಜಾಬ್ನ ಲುಧಿಯಾನ ಪೂರ್ವ ಕ್ಷೇತ್ರ,ಹಾಗೂ ಪಶ್ಚಿಮ ಬಂಗಾಳದ ಕಾಲಿಗಂಜ್ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಮಾಡಲಾಗಿದೆ.
ಜೂನ್ 19ರಂದು ಮತದಾನ ನಡೆಯಲಿದ್ದು, ಜೂನ್ 23ರಂದು ಫಲಿತಾಂಶ ಪ್ರಕಟವಾಗುತ್ತದೆ.2023ರ ಡಿಸೆಂಬರ್ನಲ್ಲಿ ವಿಸವದರ್ ವಿಧಾನ ಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಆಪ್ ಶಾಸಕ ಭೂಪೇಂದ್ರ ಬಯಾನಿ.ರಾಜೀನಾಮೆ ನಂತರ ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಸೇರಿದ್ದ ಭೂಪೇಂದ್ರ.ಸ್ಥಾನ ತೆರವಾದ ಒಂದೂವರೆ ವರ್ಷ ಬಳಿಕ ಉಪ ಚುನಾವಣೆಗೆ ದಿನಾಂಕ ನಿಗದಿ ಮಾಡಿದ ಚುನಾವಣಾ ಆಯೋಗ.