ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಸಂಪುಟ ಸಭೆ ಮಾಡಿದ್ದು, ಹಳೇ ಮೈಸೂರು ವಿಭಾಗಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಮೈಸೂರು ವಿಭಾಗ ಯೋಜನೆಗಳಿಗೆ 3,647 ಕೋಟಿ ರೂಪಾಯಿ ಮೀಸಲು ಇರಿಸಿ ತೀರ್ಮಾನ ತೆಗೆದುಕೊಂಡಿದ್ದಾರೆ
- ಮೈಸೂರು ವಿಭಾಗದ 78 ವಿಷಯಗಳ ಕುರಿತು ಚರ್ಚೆ
- 1787 ಕೋಟಿ ರೂಪಾಯಿ ನಿರಾವರಿ ಯೋಜನೆಗೆ ಮೀಸಲು
- 237 ಕೋಟಿ ರೂಪಾಯಿ ಪ.ಪಂಗಡದ ಅಭಿವೃದ್ಧಿಗಾಗಿ ಮೀಸಲು
- 210 ಕೋಟಿ ರೂಪಾಯಿ ಮಾನವ-ವನ್ಯಜೀವಿ ಸಂಘರ್ಷ ನಿವಾರಣೆಗೆ ಮೀಸಲು
- ಮೈಸೂರು ಏರ್ಪೋರ್ಟ್ ರನ್ವೇ ಜಾಗ ವಿಸ್ತರಣೆ
- ಮೈಸೂರು ಹಳೆ ಡಿಸಿ ಕಛೇರಿ ಮ್ಯೂಸಿಯಂ ಮಾಡಲಾಗುವುದು
- ಚಾಮರಾಜನಗರ ಜಿಲ್ಲೆಯ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಅಂಕಿತ