ಅನ್ನಭಾಗ್ಯಕ್ಕೆ ಖದಿಮರ ಕಣ್ಣು. ಕೆಂದ್ರ ಹಾಗೂ ರಾಜ್ಯ ಸರಕಾರದ ಮಹತ್ತರ ಯೋಜನೆಯಾಗಿರುವ ಅನ್ನಭಾಗ್ಯದ ಅಕ್ಕಿಯನ್ನು ಪಕ್ಕದ ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸುವ ಖದಿಮರಿಗೆ ಬೀಗ್ ಶಾಕ್ ಕೊಟ್ಟ ಹುಕ್ಕೇರಿ ತಹಶಿಲ್ದಾರ ಹಾಗೂ ಆಹಾರ ಇಲಾಖೆ.
ಗೋಡಾಮಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಅಕ್ಕಿಯ ಖಚಿತ ಮಾಹಿತಿಯ ಮೇರೆಗೆ ರೇಡ್,
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಬಳಿಯ ಗೋಡೌನ ಮೇಲೆ ದಾಳಿ.
ಹುಕ್ಕೇರಿ ತಹಶೀಲ್ದಾರ್, ಆಹಾರ ಇಲಾಖೆ ಅಧಿಕಾರಿಗಳಿಂದ ದಾಳಿ.
ರವಿ ಗಜಬರ, ರವಿ ಹೆಬ್ಬಾಳೆ ಎಂಬುವವರಿಗೆ ಸೇರಿದ್ದ ಗೋಡೌನ ಮೇಲೆ ದಾಳಿ.
ಪುಡ್ ಇನ್ಸ್ಪೆಕ್ಟರ್ ಇರ್ಫಾನ್ ಉಸ್ತಾದ್, ಶಿರಸ್ತೇದಾರ ಲೋಕೇಶ ಡಂಗೇರನಿಂದ ದಾಳಿ.
ದಾಳಿ ಸಂದರ್ಭ 70 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆದ ಅಧಿಕಾರಿಗಳು. KA 22 T 7938 ಲಾರಿಯಲ್ಲಿ ಅಕ್ಕಿ ತುಂಬಿಸುತ್ತಿದ್ದಾಗ ದಾಳಿ. ಲಾರಿಯನ್ನು ಮಹಾರಾಷ್ಟ್ರ ಕ್ಕೆ ಸಾಗಿಸುತ್ತಿರುವ ಖದಿಮರು.