Wednesday, June 25, 2025
26.8 C
Bengaluru
Google search engine
LIVE
ಮನೆ#Exclusive NewsTop Newsದೆಹಲಿಯಂತೆ ಬೆಂಗಳೂರಲ್ಲಿ ಮಿತಿ ಮೀರಿದ ವಾಯುಮಾಲಿನ್ಯ!

ದೆಹಲಿಯಂತೆ ಬೆಂಗಳೂರಲ್ಲಿ ಮಿತಿ ಮೀರಿದ ವಾಯುಮಾಲಿನ್ಯ!

ಒಂದೆಡೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಕರ್ನಾಟಕದ ಹಲವು ಭಾಗಗಳಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಮಳೆಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ದೆಹಲಿ ಮಾದರಿಯಲ್ಲಿ ಬೆಂಗಳೂರಿನಲ್ಲೂ ವಾಯುಮಾಲಿನ್ಯ ಹೆಚ್ಚಾಗಿದೆ, ತಂಪಾದ ವಾತಾವರಣದ ಧೂಳು ಕೂಡ ಸೇರ್ಪಡೆಗೊಂಡಿದ್ದು, ವಾಯುಮಾಲಿನ್ಯ ಹೆಚ್ಚಾಗಿದೆ.ದೆಹಲಿಯಂತೆ ಬೆಂಗಳೂರಿನಲ್ಲಿ ಕೂಡ ಗಾಳಿಯ ಗುಣಮಟ್ಟ ಕಳಪೆಯಾಗುತ್ತಿದೆ, ಒಂದೆಡೆ ಚಳಿಯು ಹೆಚ್ಚಾಗಿದ್ದು, ಹಲವು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತಿದೆ.

ನಗರದಲ್ಲಿ ಹಲವು ರಸ್ತೆಗಳು ಹದಗೆಟ್ಟ ಪರಿಣಾಮ ವಾಹನಗಳು ಓಡಾಡುವಾಗ ಧೂಳಿನಿಂದ ಜನರ ಓಡಾಟಕ್ಕೆ ಸಂಕಷ್ಟ ಎದುರಾಗಿದ್ದರೆ, ಅತ್ತ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಗರಿಷ್ಟ ಮಟ್ಟಕ್ಕೆ ತಲುಪಿದ್ದು, ಹೆಲ್ತ್ ಎಮರ್ಜೆನ್ಸಿ ಶುರುವಾದಂತಿದೆ. ಈ ಆತಂಕ ಇದೀಗ ಬೆಂಗಳೂರಿಗೂ ಕಾಡುತ್ತಿದೆ. ನಗರದ ಹಲವೆಡೆ ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಬಸವನಗುಡಿಯ ಎನ್ ಆರ್ ಕಾಲೊನಿ ಮುಖ್ಯ ರಸ್ತೆಯಲ್ಲಂತೂ ವಿಪರೀತ ಧೂಳಿಗೆ ವಾಹನ ಸವಾರರು ನಿತ್ಯ ನರಕ ಅನುಭವಿಸ್ತಿದ್ದಾರೆ.

ಪೈಪ್‌ಲೈನ್ ಕಾಮಗಾರಿಯೊಂದಕ್ಕೆ ರಸ್ತೆ ಅಗೆಯಲಾಗಿತ್ತು. ಕೆಲಸ ಮುಗಿದ ಬಳಿಕ ರಸ್ತೆ ಮಾಡದೇ ಹಾಗೆ ಬಿಟ್ಟ ಪರಿಣಾಮ‌ ಧೂಳು ಬರ್ತಿದೆ. ರಸ್ತೆಯ ಅಕ್ಕಪಕ್ಕದ ವ್ಯಾಪಾರಸ್ಥರು  ವ್ಯಾಪಾರ ಮಾಡದಂತಹ ಪರಸ್ಥಿತಿ ಇದ್ರೆ. ಬೈಕ್ ನಲ್ಲಿ ಹೋಗುವವರು, ಫುಟ್ ಪಾತ್ ಮೇಲೆ ಓಡಾಡೋರು ಕೂಡ ಸಮಸ್ಯೆ ಅನುಭವಿಸಬೇಕಾಗಿದೆ.

ಇನ್ನೂ ಬೆಂಗಳೂರು ನಗರದಲ್ಲಿ ಚಳಿಯ ವಾತಾವರಣ ಜೊತೆಗೆ ವಾಯು ಮಾಲಿನ್ಯ ಹೆಚ್ಚಾಗಿದೆ. ಅಲ್ಲದೇ ಈ ಎನ್ ಆರ್ ಕಾಲೊನಿ ರಸ್ತೆಯಲ್ಲಿ ದಿನವೂ ಓಡಾಡುವವರಿಗೆ ಧೂಳಿನ ಸಮಸ್ಯೆಯಿಂದ ಕೆಲವರಿಗೆ ಕೆಮ್ಮು, ಗಂಟಲು ನೋವು, ಡಸ್ಟ್ ಅಲರ್ಜಿಯಂತಹ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಂಡಿವೆಯಂತೆ. ಪರಿಣಾಮ‌ ಈ ರಸ್ತೆಯಲ್ಲಿ ಓಡಾಡೊಕು ಹೆದರಿಕೆ ಆಗ್ತಿದೆ. ಹೀಗಾಗಿ ಮಾಸ್ಕ್ ಹಾಕಿಕೊಂಡೆ ಓಡಾಡಬೇಕಾದ ಪರಸ್ಥಿ ಇದೆ ಅಂತಾರೆ ಹಿರಿಯ ನಾಗರಿಕರು.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments