ಸುಪ್ರೀಂ ಕೋರ್ಟ್ ತೀರ್ಪು ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಸರಕಾರಿ ನೌಕರರಿಗೆ ಪದೋನ್ನತಿಯ ಭಾಗ್ಯದ ಬಾಗಿಲು ತೆರೆದ ಸರಕಾರದ ಮಹತ್ವದ ಆದೇಶ
ಕರ್ನಾಟಕ ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಾಗ ರಿಕ್ತ ಸ್ಥಾನ ಆಧಾರಿತ ವರ್ಗೀಕರಣದ ಬದಲಾಗಿ ಹುದ್ದೆ ಆಧಾರಿತ ವರ್ಗೀಕರಣವನ್ನು ಅನುಸರಿಸುವಂತೆ ಕರ್ನಾಟಕ ಸರಕಾರವು 10.12.2021 ರಂದು ಅಧಿಕೃತ ಜ್ಞಾಪನ ಹೊರಡಿಸಿದ. ಈ ಆದೇಶವನ್ನು ಹೊರಡಿಸಲು ಕಾರಣವಾದ ಅಂಶಗಳು ಯಾವುದು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ.
ಮಾನ್ಯ ಸರ್ವೋಚ್ಚ ನ್ಯಾಯಾಲವು ಈ ಪ್ರಕರಣಗಳಲ್ಲಿ ನೀಡಿದ ತೀರ್ಪುಗಳನ್ನು ಅನುಷ್ಠಾನಗೊಳಿಸಲು ರಾಜ್ಯದ ನಾಗರಿಕ ಸೇವೆಗೆ ನಡೆಯುವ ನೇಮಕ, ಮುಂಬಡ್ತಿಗಳಿಗೆ ಹುದ್ದೆ ಆಧಾರಿತ ನೀತಿ ಅನುಸರಿಸಲು ಸರಕಾರವು ಆದೇಶಿಸಿದೆ.