ರಾಜ್ಯ ಸರ್ಕಾರವು ಹೊಸ ವರ್ಷಕ್ಕೆ ಹಲವು ಐಎಎಸ್ ಅಧಿಕಾರಿಗಳಿಗೆ ಸಿಹಿ ಸುದ್ದಿ ನೀಡಿದೆ. ಕಾರಣ ಅವರನ್ನು ವೇತನ ಶ್ರೇಣಿ ಸಹಿತಿ ಬಡ್ತಿ ನೀಡಿದೆ. ಇದೇ ವೇಳೆ ಕೆಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಆದೇಶ ಹೊರಡಿಸಲಾಗಿದೆ. ಹೌದು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೊಸ ವರ್ಷದ ಜನವರಿ 1ರಿಂದ ಜಾರಿಗೆ ಬರುವಂತೆ ಮೇಜರ್ ಸರ್ಜರಿ ಮಾಡಲಾಗಿದೆ. 37 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು 46 ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಪ್ರಕಟಿಸಿದೆ.

o ಕಮಲ್ ಪಂತ್ – ಪೊಲೀಸ್ ಮಹಾನಿರ್ದೇಶಕರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರು, ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ಮಹಾನಿರ್ದೇಶಕರು, ಕರ್ನಾಟಕ ರಾಜ್ಯದ ನಾಗರಿಕ ರಕ್ಷಣಾ ನಿರ್ದೇಶಕ.
o ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್ – ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವಿಶೇಷ ಆಯುಕ್ತ.
o ಕರ್ನಾಟಕ ರಾಜ್ಯ ಮೀಸಲು ಪೋಲೀಸ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ – ಬಿಎಂಟಿಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ.
o ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹರಿಶೇಖರನ್ – ಗೃಹರಕ್ಷಕ ದಳದ ಹೆಚ್ಚುವರಿ ಕಮಾಂಡೆಂಟ್ ಹಾಗೂ ಬೆಂಗಳೂರಿನ ನಾಗರಿಕ ರಕ್ಷಣಾ ಇಲಾಖೆಯ ಪದನಿಮಿತ್ತ ಹೆಚ್ಚುವರಿ ನಿರ್ದೇಶಕ.
o ಎಂ.ನಂಜುಂಡಸ್ವಾಮಿ – ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ)
o ಡಾ.ಚಂದ್ರಗುಪ್ತ – ಹೆಚ್ಚುವರಿ ಪೊಲೀಸ್ ಆಯುಕ್ತರು (ಅಪರಾಧ ವಿಭಾಗ)
o ಡಾ.ಕೆ.ತ್ಯಾಗರಾಜನ್ – ಐಜಿಪಿ (ಪೂರ್ವ ವಲಯ, ದಾವಣಗೆರೆ)
o ಅಮಿತ್ ಸಿಂಗ್ – ಉಪ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಪಶ್ಚಿಮ ವಲಯ, ಮಂಗಳೂರು)
o ಡಾ.ವೈ.ಎಸ್.ರವಿಕುಮಾರ್ – ಉಪ ಪೊಲೀಸ್ ಮಹಾನಿರೀಕ್ಷಕರು, ಬೆಂಗಳೂರು (ಗುಪ್ತಚರ ವಿಭಾಗ)
o ಶಂತನು ಸಿನ್ಹಾ – ಉಪ ಪೊಲೀಸ್ ಮಹಾನಿರೀಕ್ಷಕ
o ಡಾ.ದಿವ್ಯಾ ವಿ.ಗೋಪಿನಾಥ್ – ಉಪ ಪೊಲೀಸ್ ಮಹಾನಿರೀಕ್ಷಕರು (ವಿಧಿ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು)
o ಸುಧೀರ್ ಕುಮಾರ್ ರೆಡ್ಡಿ – ಉಪ ಪೊಲೀಸ್ ಮಹಾನಿರೀಕ್ಷಕರು, ಅರಣ್ಯ, ಅಪರಾಧ ತನಿಖಾ ವಿಭಾಗ
o ಆರ್.ಚೇತನ್ – ಉಪ ಪೊಲೀಸ್ ಮಹಾನಿರೀಕ್ಷಕರು ಮತ್ತು ಆಯುಕ್ತರು ಕಲಬುರಗಿ
o ವರ್ತಿಕಾ ಕಟಿಯಾರ್ – ಉಪ ಪೊಲೀಸ್ ಮಹಾನಿರೀಕ್ಷಕರು, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು
o ಕಾರ್ತಿಕ್ ರೆಡ್ಡಿ – ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ
o ಕುಲದೀಪ್ ಕುಮಾರ್ ಆರ್.ಜೈನ್ – ಉಪ ಪೊಲೀಸ್ ಆಯುಕ್ತರು, ಬೆಂಗಳೂರು ಪೂರ್ವ ವಿಭಾಗ
o ವಿನಾಯಕ್ ವಸಂತರಾವ್ ಪಾಟೀಲ್ – ಉಪ ಕಾರ್ಯದರ್ಶಿ, ಕ್ಯಾಬಿನೆಟ್ ಸೆಕ್ರೆಟರಿಯೇಟ್, ನವದೆಹಲಿ
o ಕೆ.ಸಂತೋಷ್ ಬಾಬು – ಉಪ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಆಡಳಿತ
o ಇಶಾ ಪಂತ್ – ಜಂಟಿ ಉಪ ನಿರ್ದೇಶಕರು, ಗುಪ್ತಚರ ಬ್ಯೂರೋ
o ಜಿ.ಸಂಗೀತಾ – ಪೊಲೀಸ್ ವರಿಷ್ಠಾಧಿಕಾರಿ, ಯಾದಗಿರಿ
o ಸೀಮಾ ಲಾಟ್ಕರ್ – ಪೊಲೀಸ್ ವರಿಷ್ಠಾಧಿಕಾರಿ, ಮೈಸೂರು
o ರೇಣುಕಾ ಕೆ.ಸುಕುಮಾರ್ – ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ನಗರ, ಹುಬ್ಬಳ್ಳಿ
o ಡಿ.ಆರ್.ಸಿರಿಗೌರಿ – ಉಪ ಪೊಲೀಸ್ ಆಯುಕ್ತರು, ಸಂಚಾರ, ಬೆಂಗಳೂರು ನಗರ ಉತ್ತರ
o ಪುಟ್ಟಮಾದಯ್ಯ – ಪೊಲೀಸ್ ವರಿಷ್ಠಾಧಿಕಾರಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ
o ಟಿ. ಶ್ರೀಧರ – ಸಹಾಯಕ ಪೊಲೀಸ್ ಮಹಾನಿರೀಕ್ಷಕರು, ಪ್ರಧಾನ ಕಚೇರಿ -1, ರಾಜ್ಯ ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು
o ಡಾ.ಸಂಜೀವ್ ಎಂ.ಪಾಟೀಲ್ – ಸಹಾಯಕ ಪೊಲೀಸ್ ಮಹಾನಿರ್ದೇಶಕ, ರಾಜ್ಯ ಪೊಲೀಸ್ ಪ್ರಧಾನ ಕಚೇರಿ
o ಡಾ.ಸುಮನ್ ಡಿ.ಪೆನ್ನೇಕರ್ – ಸಹಾಯಕ ಪೊಲೀಸ್ ಮಹಾನಿರೀಕ್ಷಕರು, ಆಡಳಿತ, ರಾಜ್ಯ ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು
o ರವೀಂದ್ರ ಕಾಶಿನಾಥ್ ಗಡಾಡಿ – ಪೊಲೀಸ್ ವರಿಷ್ಠಾಧಿಕಾರಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ.
o ಕ್ಯಾಪ್ಟನ್ ಅಯ್ಯಪ್ಪ ಎಂ.ಎ. – ಪೊಲೀಸ್ ಅಧೀಕ್ಷಕರು (ಲೋಕಾಯುಕ್ತ)
o ರಿಷಿಕೇಶ್ ಭಗವಾನ್ ಸೋನವಾಣೆ- ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
o ಬಿ.ಅರುನಾಂಗ್ಷು ಗಿರಿ – ಬೆಂಗಳೂರು ನಗರದ ನಗರ ಸಶಸ್ತ್ರ ಮೀಸಲು ಕೇಂದ್ರ ಕಚೇರಿಯ ಉಪ ಪೊಲೀಸ್ ಆಯುಕ್ತ
o ಹಕೈ ಅಕ್ಷಯ್ ಮಚೀಂದ್ರ – ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ಜನರಲ್ ಮತ್ತು ನಾಗರಿಕ ರಕ್ಷಣಾ ಇಲಾಖೆಯ ಪದನಿಮಿತ್ತ ಉಪ ನಿರ್ದೇಶಕ
o ನಾಗೇಶ್ ಡಿ.ಎಲ್. – ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
o ಲೋಕೇಶ್ ಭರಮಪ್ಪ ಜಗಲಾಸರ್ – ಎಸ್ಪಿ, ಕರ್ನಾಟಕ ಪೊಲೀಸ್ ಆಕಾಡೆಮಿ
o ಡಾ.ಸಿಮಿ ಮರಿಯಮ್ ಜಾರ್ಜ್ – ಸಹಾಯಕ ಪೊಲೀಸ್ ಮಹಾನಿರೀಕ್ಷಕರು, ಅಪರಾಧಗಳು, ಬೆಂಗಳೂರು
o ಪದ್ಮಿನಿ ಸಾಹೂ – ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
o ಮಿಥುನ್ ಹೆಚ್.ಎನ್. – ಉಡುಪಿಯ ಕರಾವಳಿ ಭದ್ರತಾ ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿ