
ನವದೆಹಲಿ: ವಿಶ್ವದಾದ್ಯಂತ ಈಗ ‘ಹ್ಯಾಂಟವೈರಸ್’ (Hantavirus) ಹರಡುತ್ತಿದೆ. ಅಟ್ಲಾಂಟಿಕ್ ಮಹಾಸಾಗರದ ಕ್ರೂಸ್ ಹಡಗೊಂದರಲ್ಲಿ ಕಾಣಿಸಿಕೊಂಡ ಈ ವೈರಸ್ ಈಗಾಗಲೇ ಮೂವರನ್ನು ಬಲಿಪಡೆದುಕೊಂಡಿದ್ದು ಈ ನಿಟ್ಟಿನಲ್ಲಿ ಜಾಗರೂಕತೆಯಿಂದ ಇರಲು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ. ಭಾರತೀಯರಲ್ಲಿ ಮೂಡಿದ್ದ ಆತಂಕಕ್ಕೆ ತಜ್ಞ ವೈದ್ಯರು ಸ್ಪಷ್ಟೀಕರಣ ನೀಡಿದ್ದಾರೆ.

ಹ್ಯಾಂಟವೈರಸ್-ಭಾರತಕ್ಕೆ ಸಂಚಕಾರ!
ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ವೈದ್ಯ ಹಾಗೂ ಸಂಶೋಧನಾ ವಿಭಾಗದ ಅಧ್ಯಕ್ಷ ಡಾ. ಎನ್.ಕೆ. ಗಂಗೂಲಿ ಅವರ ಪ್ರಕಾರ, “ಭಾರತದಲ್ಲಿ ಪ್ರಸ್ತುತ ಹ್ಯಾಂಟವೈರಸ್ ಹರಡುವ ಸಾಧ್ಯತೆಯಿಲ್ಲ.” ಆದ್ದರಿಂದ ಜನರು ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಹ್ಯಾಂಟವೈರಸ್ ಅಪಾಯಕಾರಿಯೇ?
ಇದು ಕೊರೊನಾವೈರಸ್ಗಿಂತಲೂ ಗಂಭೀರವಾದದ್ದು ಎಂದು ಹೇಳಲಾಗುತ್ತಿದೆ. ಡಾ. ಗಂಗೂಲಿ ಅವರ ಪ್ರಕಾರ ಇದು ಎರಡು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಪಲ್ಮನರಿ ಸಿಂಡ್ರೋಮ್: ಸೋಂಕಿತರ ಶ್ವಾಸಕೋಶವು ನೀರಿನಾಂಶದಿಂದ ತುಂಬಿಕೊಳ್ಳುತ್ತದೆ.
ಕಿಡ್ನಿ ಸಿಂಡ್ರೋಮ್: ಮೂತ್ರಪಿಂಡಗಳ ಮೇಲೆ ನೇರ ಪರಿಣಾಮ ಬೀರಿ,ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.
ಹರಡುವ ವಿಧಾನ
ಇದು ಮುಖ್ಯವಾಗಿ ಇಲಿಗಳಂತಹ ದಂಶಕಗಳಿಂದ ಹರಡುತ್ತದೆ.ಅವುಗಳ ಲಾಲಾರಸ,ಮಲ ಅಥವಾ ಮೂತ್ರದ ಸಂಪರ್ಕದಿಂದ ಮನುಷ್ಯರಿಗೆ ಸೋಂಕು ತಗುಲುತ್ತದೆ. ಸಾಮಾನ್ಯವಾಗಿ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವುದು ಬಹಳ ವಿರಳ. ಆದರೆ ಅರ್ಜೆಂಟೀನಾ ಮತ್ತು ಚಿಲಿಯಲ್ಲಿ ಕಂಡುಬರುವ ‘ಆಂಡಿ ತಳಿ’ಯ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಮರ್ಥ್ಯ ಹೊಂದಿದೆ.
ತಡೆಗಟ್ಟಲು ಪಾಲಿಸಬೇಕಾದ ಕ್ರಮಗಳು
ಹ್ಯಾಂಟವೈರಸ್ ಹೊಸದೇನಲ್ಲ,ಇದು ಕೊರಿಯಾದ ಹ್ಯಾಂಟ ನದಿಯ ತೀರದಲ್ಲಿ ಮೊದಲು ಪತ್ತೆಯಾಗಿತ್ತು.ಇದನ್ನು ತಡೆಯಲು ಭಾರತೀಯರು ಕೋವಿಡ್ ಸಮಯದಲ್ಲಿ ಪಾಲಿಸಿದಂತೆಯೇ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ದಂಶಕಗಳ ಹಾವಳಿ ಇರುವ ಕಡೆ ಜಾಗರೂಕರಾಗಿರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
#Hantavirus #HealthAlert #IndiaHealth #MedicalUpdate #DrNKGanguly #VirusOutbreak #HealthTips #FreedomTV #PublicSafety #CoronaVsHanta




