Monday, June 23, 2025
26.6 C
Bengaluru
Google search engine
LIVE
ಮನೆಜ್ಯೋತಿಷ್ಯಮಿಥುನ, ವೃಶ್ಚಿಕ, ಮಕರ ರಾಶಿಯವರಿಗೆ ಬಂಪರ್ ಲಾಟರಿ..!

ಮಿಥುನ, ವೃಶ್ಚಿಕ, ಮಕರ ರಾಶಿಯವರಿಗೆ ಬಂಪರ್ ಲಾಟರಿ..!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಗ್ರಹವನ್ನು ಗ್ರಹಗಳ ಸೇನಾಧಿಪತಿ ಮತ್ತು ಭೂಮಿಪುತ್ರ ಎಂದು ಕರೆಯಲಾಗುತ್ತೆ. ಮಂಗಳ ಗ್ರಹವು ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿಯಾಗಿದೆ. ಜಾತಕದಲ್ಲಿ ಮಂಗಳನ ಪ್ರಭಾವದಿಂದಾಗಿ ಆ ವ್ಯಕ್ತಿಯು ಸಾಹಸಿ ಮತ್ತು ಪರಾಕ್ರಮಿ ಸ್ವಭಾವವನ್ನು ಹೊಂದಿರುತ್ತಾರೆ. ಇದರೊಂದಿಗೆ ಜಾತಕದಲ್ಲಿ ಮಂಗಳ ಗ್ರಹವು ಅನುಕೂಲಕರ ಸ್ಥಿತಿಯಲ್ಲಿದ್ದರೆ, ವ್ಯಕ್ತಿಯು ಸಾಕಷ್ಟು ಅದೃಷ್ಟವನ್ನು ಪಡೆಯುವನು. ಹಾಗೆ ಕೇತು ಗ್ರಹವನ್ನು ನೆರಳು ಗ್ರಹ ಎಂದು ಸಹ ಕರೆಯುವರು. ಯಾವಾಗ ಕೇತು ಕೋಪಗೊಳ್ಳುವನೋ, ಇದರ ಪ್ರಭಾವವು ಜೀವನದ ಮೇಲೆ ಹೆಚ್ಚಾಗಿರುವುದು. ಎರಡು ಗ್ರಹಗಳು ನಿಯಮಿತ ಸಮಯಕ್ಕೆ ಸರಿಯಾಗಿ ತಮ್ಮ ರಾಶಿಯನ್ನು ಬದಲಾಯಿಸುವುದು ಮತ್ತು ಇದೇ ಜೂನ್ 7ರಂದು ಮಂಗಳ ಗ್ರಹವು ಸಿಂಹ ರಾಶಿಯನ್ನು ಈಗಾಗಲೇ ಪ್ರವೇಶಿಸಿದ್ದು, ಅಲ್ಲಿ ಕೇತು ಈ ಮೊದಲೇ ಚಲಿಸುತ್ತಿದ್ದಾನೆ. ಇದರಿಂದಾಗಿ ಮಂಗಳ ಮತ್ತು ಕೇತುವಿನ ಮಹತ್ವಪೂರ್ಣವಾದ ಸಂಯೋಗವು ರೂಪಗೊಂಡಿದ್ದು, ಇದಕ್ಕೆ ಕುಜ-ಕೇತು ರಾಜಯೋಗ ಎಂದು ಸಹ ಕರೆಯುವರು. ಈ ಶಕ್ತಿಶಾಲಿ ಯೋಗದ ನಿರ್ಮಾಣದಿಂದಾಗಿ ಕೆಲವು ರಾಶಿಗೆ ಸೇರಿದ ಜನರು ತಮ್ಮ ವೃತ್ತಿ ಜೀವನದಲ್ಲಿ ಬಡ್ತಿ ಮತ್ತು ಸಂಬಳದಲ್ಲಿ ಹೆಚ್ಚಳವನ್ನು ಪಡೆಯುವ ಉತ್ತಮ ಅವಕಾಶ ದೊರಕಲಿದೆ. ಜೊತೆಗೆ ನಿಮ್ಮ ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗುವುದು ಮತ್ತು ಯಶಸ್ಸು ಗಳಿಸಲು ಹೊಸ ಅವಕಾಶಗಳು ದೊರಕಲಿದೆ. ಹಾಗಾಗಿ ಈ ಶುಭ ಯೋಗದಿಂದ ಯಾವ ರಾಶಿಯವರು ತಮ್ಮ ಜೀವನದಲ್ಲಿ ಅತ್ಯಂತ ಹೆಚ್ಚಿನ ಲಾಭವನ್ನು ಪಡೆಯುವ ಯೋಗ ದೊರಕುತ್ತೆ ಅನ್ನೋದನ್ನ ಈ ಲೇಖನದಲ್ಲಿ ವಿವರಿಸ್ತೀವಿ

ಮಿಥುನ ರಾಶಿಗೆ ಸೇರಿದ ಜನರಿಗೆ ಕುಜ ಕೇತುವಿನ ರಾಜಯೋಗವು ಕೆಲಸ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ಸಾಕಷ್ಟ ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಸಾಹಸ ಮತ್ತು ಪರಾಕ್ರಮದಲ್ಲಿ ಹೆಚ್ಚಳವನ್ನು ನೋಡಬಹುದಾಗಿದೆ. ಇದರಿಂದಾಗಿ ಸಮಾಜದಲ್ಲಿ ನೀವು ಉತ್ತಮ ಸ್ಥಾನವನ್ನು ಗಳಿಸುವಿರಿ ಮತ್ತು ನಿಮ್ಮ ಮಾತು ಹಾಗೂ ವ್ಯಕ್ತಿತ್ವವನ್ನು ಎಲ್ಲರೂ ಹೆಚ್ಚಾಗಿ ಹೊಗಳುವರು. ಕೆಲಸದ ಸ್ಥಳದಲ್ಲಿ ಮಿಥುನ ರಾಶಿ ಸೇರಿದ ಜನರಿಗೆ ದೊಡ್ಡ ಜವಾಬ್ದಾರಿ ದೊರಕಬಹುದು ಮತ್ತು ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸ ಹಾಗೂ ವ್ಯಾಪಾರದಿಂದ ಸಾಕಷ್ಟು ಸಂತೋಷವನ್ನು ಹೊಂದುವರು.

ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ನಿಮ್ಮ ಜಾತಕದ ಒಂಬತ್ತನೇ ಮನೆಯಲ್ಲಿ ಮಂಗಳ ಮತ್ತು ಕೇತುವಿನ ಸಂಯೋಗ ಸ್ವರೂಪಗೊಂಡಿದ್ದು, ಇದರಿಂದಾಗಿ ಕುಜ-ಕೇತು ರಾಜಯೋಗದ ನಿರ್ಮಾಣವಾಗಿದೆ. ಈ ಯೋಗವು ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ನಿಮ್ಮ ವೃತ್ತಿ ಜೀವನದಲ್ಲಿ ಬಲವಾದ ಸ್ಥಾನವನ್ನು ಹೊಂದುವಂತೆ ಮಾಡುವುದು. ಹಾಗೆ ಈ ಅವಧಿಯಲ್ಲಿ ನೀವು ನಿಮ್ಮ ಕಠಿಣ ಪರಿಶ್ರಮಕ್ಕೆ ಯಶಸ್ಸನ್ನು ಪಡೆಯುವುದರೊಂದಿಗೆ ಸಾಕಷ್ಟು ಪ್ರಗತಿಯನ್ನು ಪಡೆಯುವ ಯೋಗವು ಕೂಡ ಲಭಿಸುವುದು. ಈ ಸಮಯದಲ್ಲಿ ವೃಶ್ಚಿಕ ರಾಶಿಗೆ ಸೇರಿದ ಜನರು ಬಡ್ತಿಯನ್ನು ಪಡೆಯುವುದರೊಂದಿಗೆ ಸಂಬಳದಲ್ಲಿ ವೃದ್ಧಿಯಾಗುವ ಯೋಗವೂ ಕೂಡ ಲಭಿಸಲಿದೆ.

ಮಕರ ರಾಶಿಗೆ ಸೇರಿದ ಜನರಿಗೆ ಮಂಗಳ ಮತ್ತು ಕೇತುವಿನ ಸಂಯೋಗವು ಸಾಕಷ್ಟು ಶುಭವನ್ನುಂಟು ಮಾಡಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಹಳಷ್ಟು ಬಲಗೊಳ್ಳುವುದು ಮತ್ತು ನೀವು ಸಾಕಷ್ಟು ಧನ ಸಂಪತ್ತನ್ನು ಗಳಿಸುವ ಯೋಗವು ಕೂಡ ಲಭಿಸಲಿದೆ. ಮಕರ ರಾಶಿಗೆ ಸೇರಿದ ಜನರು ಈ ಮೊದಲೇ ಹೂಡಿಕೆಯನ್ನು ಮಾಡಿದ್ದರೆ, ಈ ಅವಧಿಯಲ್ಲಿ ನಿಮಗೆ ಹಠಾತ್ ದೊಡ್ಡ ಲಾಭ ದೊರಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೀವು ಒಂಟಿಯಾಗಿ ಅಥವಾ ಪಾಲುದಾರಿಕೆಯಲ್ಲಿ ಯಾವುದಾದರೂ ಯೋಜನೆಯನ್ನು ಶುರು ಮಾಡಲು ಇದು ಉತ್ತಮ ಸಮಯವಾಗಿರಲಿದೆ. ಮಕರ ರಾಶಿಗೆ ಸೇರಿದ ಜನರು ಈ ಸಮಯದಲ್ಲಿ ಯಾವುದಾದರೂ ಸಾಮಾಜಿಕ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿಸಲ್ಪಡುವ ಅವಕಾಶವೂ ಕೂಡ ದೊರಕುವುದು.

ಮೇಲೆ ಹೇಳಿರುವ ಮೂರು ರಾಶಿಗಳಾದ ಮಿಥುನ, ವೃಶ್ಚಿಕ ಮತ್ತು ಮಕರ ರಾಶಿಗೆ ಸೇರಿದ ಜನರಲ್ಲಿ ನಿಮ್ಮ ರಾಶಿಯು ಒಂದಾಗಿದ್ದರೆ. ಮಂಗಳ ಮತ್ತು ಕೇತುವಿನ ಶುಭ ಸಂಯೋಗದಿಂದಾಗಿ ರೂಪಗೊಂಡಿರುವ ಕುಜ-ಕೇತು ರಾಜಯೋಗವು ನಿಮ್ಮ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದುವಂತೆ ಮಾಡುವುದರೊಂದಿಗೆ ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಇದರಿಂದಾಗಿ ಸುಖಮಯವಾದ ಜೀವನವನ್ನು ನಡೆಸಲು ನಿಮಗೆ ಅತ್ಯುತ್ತಮವಾದ ಅವಕಾಶಗಳು ಈ ಸಂದರ್ಭದಲ್ಲಿ ದೊರಕುವುದು..

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments