ರಾಜಕೀಯ

ಮೋದಿ ಸರ್ಕಾರ ಬಂದ್ಮೇಲೆ ಡೀಸೆಲ್​ ದರ ಏರಿಕೆ ಆಗಿದೆ; ಸಚಿವ ರಾಮಲಿಂಗಾ ರೆಡ್ಡಿ

ಕೊಪ್ಪಳ: ಮೋದಿ ಸರಕಾರ ಬರುವ ಮುನ್ನ ಇದ್ದ ಡಿಸೇಲ್ ದರ ಈಗ ಏರಿಕೆಯಾಗಿದೆ. ಕೇಂದ್ರ ಸರಕಾರ ಹೆಚ್ಚಳ ಮಾಡಿದ್ದರಿಂದ ನಾವು ಹೆಚ್ಚು ಮಾಡಿದ್ದೇವೆ. ಅವರು ಕಡಿಮೆ ಮಾಡಿದರೆ ನಾವು ದರ ಇಳಿಕೆ ಮಾಡುತ್ತೇವೆ ಎಂದು ಕೊಪ್ಪಳದಲ್ಲಿ  ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಡಿಸೇಲ್ ದರ ಏರಿಕೆ ವಿರೋಧಿಸಿ ಲಾರಿ ಮಾಲೀಕರು ಲಾರಿ ಓಡಾಟ ಬಂದ್ ಮಾಡಲಿದ್ದಾರೆ. ಈ ಕುರಿತು ಈಗಾಗಲೇ ಲಾರಿ ಮಾಲೀಕರೊಂದಿಗೆ ಸಿಎಂ ಮಾತನಾಡಲಿದ್ದಾರೆ. ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿಗೆ ಈಗಾಗಲೇ ಸಿದ್ದತೆ ನಡೆದಿದೆ. ಗರ್ಭ ಗುಡಿ ನವೀಕರಣಕ್ಕೆ ಟೆಂಡರ್ ಕರೆಯಲಾಗಿದೆ. ಇನ್ನೆರೆಡು ವರ್ಷದಲ್ಲಿ ಹುಲಿಗಿಯನ್ನು ಅಭಿವೃದ್ದಿಪಡಿಸಲಾಗುವುದು ಎಂದರು.

ಅಂಜನಾದ್ರಿ ಅಭಿವೃದ್ದಿಪಡಿಸಲಿದ್ದೇವೆ. ಈಗ 100 ಕೋಟಿ ರೂಪಾಯಿಯಲ್ಲಿ ಯೋಜನೆ ಸಿದ್ದವಾಗಿದೆ. ಕೇಂದ್ರ ಸರಕಾರದಿಂದಲೂ 34 ಕೋಟಿ ರೂಪಾಯಿ ಬರಲಿದೆ. ಅಂಜನಾದ್ರಿಯಲ್ಲಿ ಪ್ರಸಾದ. ನೈವೇದ್ಯಯ ಟೆಂಡರ್ ರದ್ದು ತಾಂತ್ರಿಕ ತೊಂದರೆಯಿಂದ ರದ್ದಾಗಿರಬಹುದು ಎಂದರು.

ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡುವಾಗ ಹೇಳುತ್ತೇವೆ. ಬಿಜೆಪಿ ಸರಕಾರದಲ್ಲಿ ಸಾರಿಗೆ ಸಂಸ್ಥೆಯಲ್ಲಿ ಸಾಲವಿತ್ತು. ಈ ಸಾಲವನ್ನು ತೀರಿಸಲಾಗುತ್ತಿದೆ ಎಂದರು.

Comments (0)

Your email address will not be published. Required fields are marked *

Back to top button