#Exclusive NewsTop Newsಜಿಲ್ಲೆಸುದ್ದಿ
ಬೆಂಗಳೂರಿನಲ್ಲಿ ಮಧ್ಯಾಹ್ನವೇ ಮಳೆ ಶುರು

ಬೆಂಗಳೂರು, ಅ.03: ರಾಜ್ಯ ರಾಜಧಾನಿಯಲ್ಲಿ ಮಟ ಮಟ ಮಧ್ಯಾಹ್ನವೇ ಮಳೆಯ ಆಗಮನವಾಗಿದೆ. ದಿಢೀರ್ ತುಂತುರು ಮಳೆಯಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದ್ದು, ನಗರದ ಕೆ.ಆರ್ ಮಾರ್ಕೆಟ್, ಚಾಮರಾಜಪೇಟೆ, ಜಯನಗರ, ಶಾಂತಿನಗರ ಹಾಗೂ ಕಾರ್ಪೋರೇಶನ್ ಸುತ್ತಾಮುತ್ತ ಮಳೆ ಆರಂಭವಾಗಿದೆ.ಕೆಲವೇ ಕ್ಷಣದ ಮಳೆಗೆ ಕೆ.ಆರ್.ಸರ್ಕಲ್ ಬಳಿ ನೀರು ನಿಂತು ರಸ್ತೆ ಹೊಳೆಯಂತಾಗಿದೆ. ರಸ್ತೆಯಲ್ಲಿ ನಿಂತ ನೀರಲ್ಲೇ ವಾಹನಗಳ ಸಂಚಾರ ಮಾಡುತ್ತಿದ್ದು, ಸಂಚಾರ ವ್ಯತ್ಯಯವಾಗಿದೆ.




