ಕೊಪ್ಪಳ: ಲೋಕ ಸಮರದ ಹೊತ್ತಲ್ಲಿ ಸಚಿವ ಶಿವರಾಜ್ ತಂಗಡಗಿಯ ಮೋದಿ ವಿರುದ್ಧದ ಹೇಳಿಕೆಯನ್ನ ತೀವ್ರವಾಗಿ ಖಂಡಿಸುತ್ತಿರುವ ಕೇಸರಿ ಪಾಳಯ, ಶಿವರಾಜ್ ತಂಗಡಗಿ ವಿರುದ್ಧ ಕತ್ತಿ ಮಸಿಯುತ್ತಿದೆ.ಕೇಸರಿ ಕಲಿಗಳ ಪ್ರತಿಭಟನೆ ಆಕ್ರೋಶಗಳೆಲ್ಲವೂ ಸಂಸ್ಕೃತ ಇಲಾಖೆ ಸಚಿವರ ನಿದ್ದೆಗೆಡಿಸಿದೆ. ಬಿಜೆಪಿ ಮಾಜಿ ಶಾಸಕ ಬಸವರಾಜ ದಡೆಸೂಗೂರು ಈ ಬಗ್ಗೆ ಮಾತನಾಡಿ, ಕಾಂಗ್ರೆಸ್ ನಾಯಕರಿಗೆ ಟೀಕೆ ಮಾಡೋದು ಖಯಾಲಿಯಾಗಿ ಬಿಟ್ಟಿದೆ ಎಂದು ಟೀಕಿಸಿದ್ರು.
ಪ್ರಧಾನಿ ಮೋದಿಯ ಬಗ್ಗೆ ಮಾತನಾಡಲು ಅವ್ರಿಗ್ಯಾವ ಯೋಗ್ಯತೆ ಇದೆ ಎಂದು ತಂಗಡಗಿ ವಿರುದ್ಧ ಕಿಡಿಕಾರಿದ್ರು.ಒಂದು ನಯಾಪೈಸೆಯ ಕೆಲಸ ಮಾಡದೆ ಇರುವವರು ಮೋದಿ ಬಗ್ಗೆ ಮಾತಾಡ್ತಾರೆ,ಜನ ಅಂತಹ ವ್ಯಕ್ತಿಗಳಿಗೆ ಈ ಬಾರಿಯ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದು ತಂಗಡಗಿ ವಿರುದ್ಧ ವಾಕ್ಪ್ರಹಾರ ನಡೆಸಿದರು.