ಕೊಡಗು : ಮಡಿಕೇರಿ ಕ್ಷೇತ್ರದ ಶಾಸಕರಾದ Dr. ಮಂತರ್ ಗೌಡ ಸೋಮವಾರಪೇಟೆ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ರಾಮನ ಪ್ರತಿಷ್ಟಾಪನೆ ಸಲುವಾಗಿ,ಕೊಡಗು ಜಿಲ್ಲೆಯಲ್ಲಿ ರಾಮ ಭಕ್ತರು ದೇವಸ್ಥಾನದಲ್ಲಿ ಬೆಳಿಗ್ಗೆ ಇಂದಲೇ ಪೂಜಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.
ಸರ್ಕಾರ ರಜೆ ನೀಡದೆ ಇದ್ದರು ಕೂಡ ಕೊಡಗಿನಲ್ಲಿ ಕೆಲವು ಶಾಲೆಯ ಶಾಲಾ ಮಕ್ಕಳು ವೈಯಕ್ತಿಕವಾಗಿ ರಜೆ ಮಾಡಿ ರಾಮ ದೇವರ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರಪೇಟೆಯ ಶ್ರೀ ರಾಮ ಮಂದಿರ ಹಾಗೂ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಶಾಸಕ ಡಾ.ಮಂತರ್ ಗೌಡ ವಿಶೇಷ ಪೂಜೆ ಸಲ್ಲಿಸಿದರು.