Tuesday, June 24, 2025
25.1 C
Bengaluru
Google search engine
LIVE
ಮನೆರಾಜ್ಯಶ್ರೀಗಂಧ ಮರಗಳ್ಳತನ ಪ್ರಕರಣ, 4 ಜನ ಆರೋಪಿಗಳ ಬಂಧನ

ಶ್ರೀಗಂಧ ಮರಗಳ್ಳತನ ಪ್ರಕರಣ, 4 ಜನ ಆರೋಪಿಗಳ ಬಂಧನ

ವಿಜಯನಗರ : ಹಂಪಿಯಲ್ಲಿ ಶ್ರೀಗಂಧದ ಮರಗಳ್ಳತನ ಮಾಡುತ್ತಿದ್ದ 4 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸಪೇಟೆಯ ಆಶ್ರಯ ಕಾಲೊನಿಯ ಗಾಳೆಪ್ಪ (20), ಗೌಳೇರಹಟ್ಟಿಯ ಕೆ.ಲೋಕೇಶ್ (20), ದೂಳ್ ಪೇಟೆಯ ಕೆ.ಲಕ್ಷ್ಮಣ (21), ಸಿರಸಿನಕಲ್ಲು ಪ್ರದೇಶದ ಹುಲುಗಪ್ಪ (26) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿತರಿಂದ 60 ಸಾವಿರ ರೂ. ನಗದು, 3 ಲಕ್ಷ ಮೌಲ್ಯದ ಬೊಲೆರೊ ಜೀಪ್,  62 ಸಾವಿರ ಮೌಲ್ಯದ 2 ಬೈಕ್, 3 ಮೊಬೈಲ್, 5 ಸಾವಿರ ಬೆಲೆ ಬಾಳುವ 2 ಕೆ.ಜಿ.ಶ್ರೀಗಂಧದ ಮರದ ಕಟ್ಟಿಗೆ ತುಂಡನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳೆದ ನವೆಂಬರ್ 24 ರಂದು ಹಂಪಿಯ ಕಮಲ ಮಹಲ್ ಆವರಣದಲ್ಲಿನ ಶ್ರೀಗಂಧದ ಮರವನ್ನು ದುಷ್ಕರ್ಮಿಗಳು ಕತ್ತರಿಸಿ ಹೊತ್ತೊಯ್ದಿದ್ದರು. ಈ ಕುರಿತು ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments