ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಭೈರದೇನಹಳ್ಳಿಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ನಡೀತು.. ಈ ಸಮಾವೇಶದಲ್ಲಿ ಜನರೇ ಇಲ್ಲದೆ ಕುರ್ಚಿಗಳು ಬಣಗುಡುತ್ತಿದ್ದವು
ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವಾಗಲೂ ಜನರೇ ಇರಲಿಲ್ಲ.. ಸಚಿವ ಕೆ.ಹೆಚ್.ಮುನಿಯಪ್ಪ ನೇತೃತ್ವದಲ್ಲಿ ನಡೆದ 2 ವರ್ಷದ ಸಾಧನೆ ಸಾಮಾವೇಶ ಸಭೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು.
ಸಚಿವ ಜಮೀರ್, ಸಚಿವ ಹೆಚ್.ಸಿ. ಮಹದೇವಪ್ಪ, ಬೋಸರಾಜು ಸೇರಿದಂತೆ ಇಡೀ ಸರ್ಕಾರವೇ ಉಪಸ್ಥಿತಿ ಇದ್ದ ಕಾರ್ಯಕ್ರಮಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು
ಸಚಿವ ಕೆ.ಹೆಚ್.ಮುನಿಯಪ್ಪ ಅವರು ಬರೋಬ್ಬರಿ ಒಂದು ವಾರಗಳ ಕಾಲ ಈ ಸಮಾವೇಶ ನಡೆಸಲು ಸಿದ್ದತೆ ನಡೆಸಿದ್ದರು.
ಈ ಮೊದಲು ಮೊದಲು ಸಿಎಂ ಭಾಷಣ ಕೇಳಲು ಜನ ಮುಗಿಬಿದ್ದು ಬರ್ತಿದ್ರು. ಆದ್ರೆ ದೇವನಹಳ್ಳಿ ಸಮಾವೇಶಕ್ಕೆ ಸಿದ್ದು ಭಾಷಣ ಕೇಳಲು ಜನ ನಿರುತ್ಸಾಹ ತೋರಿದ್ರು. ಕೋಟ್ಯಾಂತರ ರೂಗಳು ಖರ್ಚು ಮಾಡಿದ್ದ ಸಾಧನೆ ಸಮಾವೇಶ ಸಂಪೂರ್ಣ ವಿಫಲ ಆಯ್ತು