ಕ್ರೈಂ ಸ್ಟೋರಿಜಿಲ್ಲೆರಾಜ್ಯಸುದ್ದಿ
ಕೋಳಿ ಗ್ರೈಂಡರ್ನಿಂದ ಜೀವ ಬಿಟ್ಟ..!

ಮಂಡ್ಯ: ತಾಲೂಕಿನ ಕೆರಗೋಡು ಹೋಬಳಿ ಹಂಚಹಳ್ಳಿ ಗ್ರಾಮದ ವೆಂಕಟೇಶ್ ಎಂಬುವವರ ಮಗ ಸಂಜಯ್ ಎಂಬ 22 ವರ್ಷದ ಯುವಕ ಬಿಳಿದೇಗಲಿನ ಕೋಳಿ ಮಾಂಸದ ಅಂಗಡಿಯಲ್ಲಿ ಕೋಳಿ ಕ್ಲಿನಿಂಗ್ ಗ್ರೈಂಡರ್ ನಿಂದ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಯುವಕನು ಅಕಾಲಿಕ ದುರ್ಮರಣಕ್ಕಿಡಾದ ಕಾರಣ ಕುಟುಂಬಸ್ಥರು ಆಂಕ್ರದನ ಮುಗಿಲು ಮುಟ್ಟಿದೆ.
ಬಿಳಿದೇಗಲು ಗ್ರಾಮದ ಕೋಳಿ ಅಂಗಡಿ ಮಳಿಗೆಯ ಮಾಲೀಕನ ತೀವ್ರ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದಾಗಿ ವಿದ್ಯುತ್ ಅರ್ಥಿಂಗ್ ಮಾಡದೇ ಯುವಕನೊರ್ವ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ.




