ಚನ್ನ ಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಎದುರು NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೀನಾಯವಾಗಿ ಸೋತಿದ್ದಾರೆ.
1,12,642 ಗಳನ್ನ ಸಿ.ಪಿ.ಯೋಗೇಶ್ವರ್ ಗಳಿಸಿದ್ದು, ನಿಖಿಲ್ ಕುಮಾರಸ್ವಾಮಿ 87,229 ಮತಗಳಿಗೆ ಸೀಮಿತವಾಗಿದ್ದಾರೆ.. ಮಂಡ್ಯ, ರಾಮನಗರ ಬಳಿಕ ಈಗ ಚನ್ನಪಟ್ಟಣದಲ್ಲಿ ಸೋಲೋ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ.. ಸದ್ಯ ನಿಖಿಲ್ ಕುಮಾರಸ್ವಾಮಿ ಮೂರನೇ ಬಾರಿ ಸೋಲು ಸಾಕಷ್ಟು ಕಾರಣಗಳಿವೆ.. JDS ಭದ್ರಕೋಟೆಯಲ್ಲಿ ನಾವು ಗೆದ್ದೇ ಗೆಲ್ತೀವಿ ಎಂಬ ಅತಿಯಾದ ಆತ್ಮವಿಶ್ವಾಸ ಇತ್ತು.. ನಿರೀಕ್ಷಿಸಿದಂತೆ ಒಕ್ಕಲಿಗ ಸಮುದಾಯ ನಿಖಿಲ್ ಕೈ ಹಿಡಿಯಲಿಲ್ಲ.. ಸತತವಾಗಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರ ಬದಲಾಯಿಸುತ್ತಿದ್ದಾರೆ..
ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ದಳಪತಿಗಳು ಮೊದಲಿನಿಂದಲೂ ಗೊಂದಲದಲ್ಲಿದ್ದರು.. ಕೊನೆಘಳಿಗೆಯಲ್ಲಿ ಕಾರ್ಯಕರ್ತರ ಒತ್ತಡದ ಮೇರೆಗೆ ನಿಖಿಲ್ ಸ್ಪರ್ಧಿಸಿದ್ರು.. ಚುನಾವಣೆ 2 ತಿಂಗಳು ಇದ್ದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷೇತ್ರ ಪ್ರವಾಸ ಮಾಡಿದ್ದು ಲಾಭದಾಯಕವಾಗಿದೆ..