Thursday, January 29, 2026
22.8 C
Bengaluru
Google search engine
LIVE
ಮನೆ#Exclusive NewsTop Newsಬಶೆಟ್ಟಹಳ್ಳಿಯಲ್ಲಿ ಎಂ ಆರ್ ಪಿ ಯು ಕಾಲೇಜು ವತಿಯಿಂದ ವಾರ್ಷಿಕ ಶಿಬಿರ

ಬಶೆಟ್ಟಹಳ್ಳಿಯಲ್ಲಿ ಎಂ ಆರ್ ಪಿ ಯು ಕಾಲೇಜು ವತಿಯಿಂದ ವಾರ್ಷಿಕ ಶಿಬಿರ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿರೋ ಎಂ ಆರ್ ಪಿ ಯು ಕಾಲೇಜು ವತಿಯಿಂದ ಆಯೋಜಿಸಲಾಗಿರುವ 7 ದಿನಗಳ ವಾರ್ಷಿಕ ವಿಶೇಷ ಶಿಬಿರಕ್ಕೆ ಗಿಡ ನೆಡುವುದರ ಮೂಲಕ್ಕೆ ಚಾಲನೆ ನೀಡಲಾಯ್ತು.. ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡ ಸುಮಾರು 60 ರಿಂದ 70 ಎನ್​ ಎಸ್​ ಎಸ್​ ವಿದ್ಯಾರ್ಥಿಗಳು ಬಶೆಟ್ಟಹಳ್ಳಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ರು.. ಎಸ್​ ಎಸ್​ ಎಸ್​ ವಿದ್ಯಾರ್ಥಿಗಳ ಕಾರ್ಯಕ್ಕೆ ಬಶೆಟ್ಟಹಳ್ಳಿ ಗ್ರಾಮಸ್ಥರು ಕೂಡ ಕೈಜೋಡಿಸಿರೋದು ಮತ್ತೊಂದು ವಿಶೇಷ..

ಇನ್ನು, ಇದೇ ಮೊದಲ ಬಾರಿಗೆ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತತಿ ವ್ಯಾಪ್ತಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕಾನೂನು ತಜ್ಞರು ಎನ್​ ಎಸ್ ಎಸ್ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ರು.. ಎಂ ಆರ್ ಪಿ ಯು ಕಾಲೇಜು ವತಿಯಿಂದ ಆಯೋಜಿಸಲಾಗಿರುವ 7 ದಿನಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ಸಹಬಾಳ್ವೆಯ ಬಗ್ಗೆ ಜಾಗೃತಿ ಮೂಡಿಸಲಾಯ್ತು.. ಈ ವೇಳೆ ಮಾತ್ನಾಡಿದ ಎಂ ಆರ್ ಪಿ ಯು ಕಾಲೇಜು ಪ್ರಾಂಶುಪಾಲರಾದ ಡಾ. ಕೆ.ಮೂರ್ತಿ ಸಾಮ್ರಾಟ್ ಅವ್ರು, ಸಾಮಾಜಿಕ ಬದಲಾವಣೆ ತರೋದೇ ಎನ್​ ಎಸ್ ಎಸ್ ಶಿಬಿರ ಆಯೋಜನೆಯ ಉದ್ದೇಶ ಅಂತ ತಿಳಿಸಿದ್ರು..

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments