ಕ್ರಿಕೆಟ್ರಾಜ್ಯಸುದ್ದಿ

ಸೈಕಲ್ ಜಾತಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಚಾಲನೆ

ಬಾಗಲಕೋಟೆ : ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಬಾಗಲಕೋಟೆಯ ಜಮಖಂಡಿ ನಗರದಲ್ಲಿ ಸೈಕಲ್ ಜಾತಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ ಎಂ ಚಾಲನೆ ನೀಡಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಜಮಖಂಡಿ ನಗರದ ತಹಶೀಲ್ದಾರ್ ಕಾರ್ಯಾಲಯದಿಂದ ಆರಂಭವಾದ ಸೈಕಲ್ ಜಾತಾ, ದೇಸಾಯಿ ಸರ್ಕಲ್, ಅಶೋಕ್ ಸರ್ಕಲ್, ಹಳೆ ತಹಸಿಲ್ದಾರ್ ಕಾರ್ಯಾಲಯ, ಟಿಪ್ಪು ಸರ್ಕಲ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಮಾರ್ಗವಾಗಿ ಶಿವಾಜಿ ಸರ್ಕಲ್ ವರೆಗೆ ಸೈಕಲ್ ಜಾತಾ ಸಾಗಿತ್ತು.

ಸೈಕಲ್ ಜಾತಕದಲ್ಲಿ ಬಾಗಲಕೋಟೆ ಎಸ್ಪಿ ಅಮರಾನಾಥ್ ರೆಡ್ಡಿ, ಸಿ ಇ ಓ ಶಶಿಧರ್ ಕುರೇರ, ಜಮಖಂಡಿ ಉಪವಿಭಾಗ ಅಧಿಕಾರಿ ಸಂತೋಷ ಕಾಮಗೌಡ, ಡಿವೈಎಸ್ಪಿ ಶಾಂತವಿರ್ ಇ, ಜಮಖಂಡಿ ತಹಸೀಲ್ದಾರ್ ಸಾಧಾಶಿವ ಮಕ್ಕೋಜಿ, ಪೌರಆಯುಕ್ತೆ ಲಕ್ಷ್ಮಿ ಅಷ್ಟಿಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Comments (0)

Your email address will not be published. Required fields are marked *

Back to top button