ಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಇಲಾಖೆಯವರು ಕ್ರೀಕೆಟ್ ಮಂದ್ಯಾವಳಿಗಳನ್ನು ಏ. 22ರಿಂದ ಆರಂಭಿಸಲಾಗಿತ್ತು. ಅಂತಿಮವಾಗಿ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ತಂಡಗಳು ಪೈನಲ್ ಪ್ರವೇಶಿಸಿದವು.
ಇಂದು ಬೆಳಿಗ್ಗೆ 7ಗಂಟೆಗೆ ಪೈನಲ್ ಪಂದ್ಯ ನಗರದ ವಿದ್ಯಾದಾನ ಶಿಕ್ಷಣ ಸಮೀತಿ ಮೈದಾನದಲ್ಲಿ ಜರುಗಿತು. ಅಂತಿಮವಾಗಿ ಪೈನಲ್ ಪಂದ್ಯದಲ್ಲಿ ಶಿಕ್ಷಣ ಇಲಾಖೆಯನ್ನು ಮಣಿಸಿದ ಆರೋಗ್ಯ ಇಲಾಖೆ ಕಪ್ ಮುಡಿಗೇರಿಸಿಕೊಂಡಿತು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ ಎಲ್ ಅವರು ಆಟಗಾರರಿಗೆ ಸ್ಪೂರ್ತಿಯ ಮಾತುಗಳನ್ನಾಡಿ, ಬ್ಯಾಟ್ ಬಿಸುವುದರ ಮೂಲಕ ಚಾಲನೆ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಯುವ ಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ಅಧಿಕಾರಿ ಶರಣು ಗೋಗೆರಿ, ರಾಜ್ಯ ನೌಕರರ ಸಂಘದ ಉಪಾಧ್ಯಕ್ಷ ರವಿ ಗುಂಜೀಕರ, ಹಿಂದೂಳಿದ ವರ್ಗಗಗಳ ಕಲ್ಯಾಣ ತಾಲೂಕಾಧಿರಿ ಬಸವರಾಜ ಬಳ್ಳಾರಿ ಉಪಸ್ಥಿತರಿದ್ದರು.