Freedom TV

ಚಿರತೆ ಅಟ್ಯಾಕ್‌ಗೆ 21 ಕುರಿಗಳು ಬಲಿ

 

ಬಳ್ಳಾರಿ; ಹೊಲದಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ಇದ್ದಕಿದ್ದಂತೆ ಚಿರತೆ ದಾಳಿ ಮಾಡಿ 21 ಕುರಿಗಳನ್ನು ಬಲಿ ಪಡೆದುಕೊಂಡಿದೆ. ಘಟನೆ ಬಳ್ಳಾರಿ ತಾಲೂಕಿನ ಸಂಜೀವರಾಯನಕೋಟೆ ಗ್ರಾಮದ ಬಳಿ ನಡೆದಿದೆ.

ತಡ ರಾತ್ರಿ ಚಿರತೆಯೊಂದು ಹೊಲಕ್ಕೆ ನುಗ್ಗಿದ್ದು ಹಟ್ಟಿಹಾಕಿದ್ದ 21 ಕುರಿಗಳನ್ನ ಸಾಯಿಸಿ, 2 ಕುರಿ ಹೊತ್ತೊಯ್ದಿದೆ. ರೈತ ತಿಮ್ಮಪ್ಪ ಎಂಬುವವರ 21 ಕುರಿಗಳು ಮೃತಪಟ್ಟಿವೆ. ಕುರಿ ಕಳೆದಕೊಂಡ ಕಂಗಾಲಾಗಿದ್ದಾನೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments (0)

Your email address will not be published. Required fields are marked *

Back to top button