Freedom TV

ಕಿಡಿಗೇಡಿಗಳಿಂದ ಮೆಣಸಿನಕಾಯಿಗೆ ಬೆಂಕಿ..!

ಬಳ್ಳಾರಿ:- ಕಿಡಿಗೇಡಿಗಳಿಂದ ಮೆಣಸಿನಕಾಯಿ ರಾಶಿಗೆ ಬೆಂಕಿ ಹಚ್ಚಿದ ಘಟನೆ ಬಳ್ಳಾರಿ ತಾಲೂಕಿನ ಶ್ರೀಧರಗಡೆ ಗ್ರಾಮದಲ್ಲಿ ಜರುಗಿದೆ. ಈ ಘಟನೆಯಲ್ಲಿ ಮೆಣಸಿನಕಾಯಿ ಸಂಪೂರ್ಣ ಸುಟ್ಟು ಕರಕಲಾಗಿ ಭಸ್ಮವಾಗಿದೆ.

ಶ್ರೀಧರಗಡೆ ಗ್ರಾಮದ ರೈತರಿಗೆ ಸೇರಿದ 6 ಎಕರೆ ಮೆಣಸಿನ ಕಾಯಿ ಭಸ್ಮವಾಗಿದೆ. ಹರಿದು ರಾಶಿ ಹಾಕಿರುವ ಮೆಣಸಿನ ಕಾಯಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹತ್ತಿದ ಮೆಣಸಿನ ರಾಶಿಗೆ ನೀರು ಹಾಕಿದರೂ ಬೆಂಕಿಯ ಕೆಂಡ ನಂದಿಲ್ಲ. ಸುಟ್ಟ ಮೆಣಸಿನ ಕಾಯಿಯನ್ನು ನೋಡಿ ರೈತರು ಕಣ್ಣೀರಿಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button