Tuesday, June 24, 2025
25.9 C
Bengaluru
Google search engine
LIVE
ಮನೆUncategorizedನ್ಯಾಯಾಲಯಗಳಲ್ಲಿ ಪೂಜಾ‌ ವಿಧಾನಗಳಿಗೆ ಬ್ರೇಕ್ ... ನ್ಯಾಯಮೂರ್ತಿ ಓಕಾ

ನ್ಯಾಯಾಲಯಗಳಲ್ಲಿ ಪೂಜಾ‌ ವಿಧಾನಗಳಿಗೆ ಬ್ರೇಕ್ … ನ್ಯಾಯಮೂರ್ತಿ ಓಕಾ

ಪುಣೆ: ನ್ಯಾಯಾಲಯ ಸಂಬಂಧಿತ ವಿವಿಧ ಕಾರ್ಯಕ್ರಮಗಳಲ್ಲಿ ಪೂಜೆಗಳು ಹಾಗೂ ಹಿಂದೂ ಧಾರ್ಮಿಕ ವಿಧಿಗಳನ್ನು ನಿಲ್ಲಿಸಬೇಕೆಂದುಸುಪ್ರೀಂ ಕೋರ್ಟ ನ್ಯಾಯಮೂರ್ತಿ ಓಕಾ ತಿಳಿಸಿದರು.
ಸಮಾರಂಭಗಳನ್ನು ಆರಂಭಿಸುವಾಗ ಪೂಜಾ ವಿಧಿಗಳಿಗಿಂತ, ಸಂವಿಧಾನದ ಮುನ್ನುಡಿಯ ಪ್ರತಿಗೆ ನಮಸ್ಕರಿಸುವ ಮೂಲಕ ಜಾತ್ಯಾತೀತತೆಯನ್ನು ಉತ್ತೇಜಿಸಬೇಕೆಂದು ಅವರು ಹೇಳಿದರು. ಇತ್ತೀಚಿಗೆ ಪುಣೆಯ ಪಿಂಪ್ರಿ-ಚಿಂಚ್ವಾರ್ಡ್ನಲ್ಲಿ ಹೊಸ ನ್ಯಾಯಾಲಯದ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಲವೊಮ್ಮೆ ನ್ಯಾಯಾಧೀಶರು ಕೆಲವು ಬಾರಿ ಅಹಿತಕರ ವಿಷಯಗಳನ್ನು ಹೇಳಬೇಕಾಗುತ್ತದೆ. ನಾನು ಸ್ವಲ್ಪ ಅಹಿತಕರವಾದ ವಿಷಯಗಳನ್ನು ಹೇಳುತ್ತಿದ್ದೇನೆ. ನ್ಯಾಯಾಲಯಗಳಲ್ಲಿನ ಸಮಾರಂಭಗಳಲ್ಲಿ ಪೂಜೆ-ಅರ್ಚನೆಯನ್ನು ನಿಲ್ಲಿಸಬೇಕು ಎಂದು ಭಾವಿಸುತ್ತೇನೆ. ಇದರ ಬದಲು ಸಂವಿಧಾನ ಪೀಠಿಕೆ ಚಿತ್ರವನ್ನು ಪೂಜಿಸಬೇಕು ಎಂದರು. ಕರ್ನಾಟಕ ಹೈಕೋರ್ಟನ ಮುಖ್ಯ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ತಾವು ಮಾಡಿದ ಪ್ರಯತ್ನಗಳನ್ನು ಈ ವೇಳೆ ಒತ್ತಿ ಹೇಳಿದ ನ್ಯಾಯಮೂರ್ತಿ ಓಕಾ ಅವರು, ನಾನು ಕರ್ಮಾಟಕದಲ್ಲಿ ಇಂತಹ ಮಾಡಿದಾಗ ಅಷ್ಟು ಯಶಸ್ವಿಯಾಗಲು ಸಾಧ್ಯವಾಗಿಲ್ಲ. ಆದರೆ, 75 ವರ್ಷಗಳನ್ನು ಪೂರ್ಣಗೊಳಿಸಿರುವ ಈ ಸಂದರ್ಭದಲ್ಲಿ ಜಾತ್ಯಾತೀತತೆಯನ್ನು ಮುನ್ನಡೆಸಲು ನಮಗೆ ಇದು ಉತ್ತಮ ಸಮಯವಾಗಿದೆ ಎಂದು ಸಹ ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments