ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಸಿಎಂ ಗಾದಿಗಾಗಿ ಸ್ಪರ್ಧೆ ತೀವ್ರಗೊಂಡ ಹೊತ್ತಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಐತಿಹಾಸಿಕ ನ್ಯಾಯ ಸಿಗುವ ದಿನಗಳು ಹತ್ತಿರವಾಗಿವೆ. ಹಾಲಿ ಗೃಹಮಂತ್ರಿ ಪರಮೇಶ್ವರ್ ಅವರನ್ನು ಸಿಎಂ ಗಾದಿಗೆ ಪರಿಗಣಿಸಲು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆದಿವೆ.
ಬುಧವಾರ ರಾತ್ರಿ ಬೆಂಗಳೂರಿಗೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸೂರ್ಜೆವಾಲಾ ಅವರನ್ನು ಪರಮೇಶ್ವರ್ ಪ್ರತ್ಯೇಕವಾಗಿ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿಯನ್ನು ಬದಲಾಯಿಸುವುದೇ ಆದರೇ, ಸಿದ್ದರಾಮಯ್ಯ ಅವರ ಸ್ಥಾನಕ್ಕೆ ತಮ್ಮನ್ನು ಪರಿಗಣಿಸಿ ಎಂಬ ಬೇಡಿಕೆ ಇಟ್ಟಿದ್ದಾರೆ.
ಎರಡು ಅವಧಿಗೆ ಪಕ್ಷಾಧ್ಯಕ್ಷನಾಗಿ ಸಮರ್ಥವಾಗಿ ಕೆಲಸ ಮಾಡಿರುವುದು ನಿಮಗೆ ಗೊತ್ತಿದೆ. ಪಿತೂರಿಯ ಪರಿಣಾಮ ಈ ಹಿಂದೆ ಅಧಿಕಾರ ಕೈತಪ್ಪಿರುವುದು ನಿಮಗೆ ಗೊತ್ತಿದೆ.. ಈಗ ನನ್ನ ಸಮುದಾಯಕ್ಕೆ ಐತಿಹಾಸಿಕ ನ್ಯಾಯ ಸಿಗಬೇಕಿದೆ. ಸಿಎಂ ಗಾದಿಯನ್ನು ನನಗೆ ನೀಡುವುದು ಸೂಕ್ತ. ಪಿತೂರಿವೀರರ ಯಾವುದೇ ಚಾಡಿಗಳಿಗೆ ಕಿವಿ ಕೊಡಬೇಡಿ.. ಪಕ್ಷವನ್ನು ಬಲಿಷ್ಠಗೊಳಿಸುವ ಸಲುವಾಗಿ ಮತ್ತು ಸುಗಮ ಆಡಳಿತದ ಸಲುವಾಗಿ ನನ್ನನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಿ..ನಿಮ್ಮ ವಿಶ್ವಾಸಕ್ಕೆ ಚ್ಯುತಿ ತರಲ್ಲ.. ನಿಮ್ಮ ನಂಬಿಕೆಗೆ ಚ್ಯುತಿ ತರಲ್ಲ.. ಇದು ನಿಮಗೂ ಗೊತ್ತಿದೆ.
ನಾನು ಸಿಎಂ ಆಗುವುದಾದರೇ ಎಸ್ಟಿ ಎಸ್ಸಿ ಸಮುದಾಯದ 55 ಶಾಸಕರು ಬೆಂಬಲಕ್ಕೆ ನಿಲ್ಲುತ್ತಾರೆ. ಬರೀ ಅವರಷ್ಟೇ ಅಲ್ಲ.. ನನಗೆ ಎಲ್ಲಾ ಶಾಸಕರ ಬೆಂಬಲ ಸಿಗಲಿದೆ.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೃಪಾಶೀರ್ವಾದವೂ ನನ್ನ ಮೇಲೆಯೇ ಇದೆ. ಹೀಗಾಗಿ ಈ ಬಾರಿ ನನ್ನನ್ನು ಪಕ್ಕಕ್ಕೆ ಸರಿಸಿ ಐತಿಹಾಸಿಕ ಪ್ರಮಾದ ಎಸಗಬೇಡಿ ಎಂದು ಪರಮೇಶ್ವರ್ ತುಂಬಾ ಸ್ಪಷ್ಟವಾಗಿ ತಮ್ಮ ವಾದ ಮುಂದಿರಿಸಿದ್ದಾರೆ.
ಪರಮೇಶ್ವರ್ ಅವರ ಸಿಎಂ ಗಾದಿಯ ಬೇಡಿಕೆಗೆ ಹೈಕಮಾಂಡ್ ನಾಯಕರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಐತಿಹಾಸಿಕ ನ್ಯಾಯ ಒದಗಿಸಲು ಚಿಂತನೆ ನಡೆಸಿದೆ. ಸಿಎಂ ಗಾದಿಗೆ ನಿಮ್ಮನ್ನು ಪರಿಗಣಿಸಲು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ. ಡೋಂಟ್ ವರಿ.. ನಿಮ್ಮೊಂದಿಗೆ ನಾವಿದ್ದೇವೆ.. ಚರ್ಚೆ ಮಾಡ್ತೇವೆ.. ಎಂಬ ರಹಸ್ಯ ಸಂದೇಶವನ್ನು ಪರಮೇಶ್ವರ್ ಅವರಿಗೆ ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸೂರ್ಜೆವಾಲಾ ನೀಡಿದ್ದಾರೆ..
ಗೃಹಸಚಿವ ಪರಮೇಶ್ವರ್ ಅವರ ಸಿಎಂ ಕನಸು ನನಸಾಗುವ ದಿನಗಳು ಸನಿಹದಲ್ಲಿದ್ದು, ಪರಮೇಶ್ವರ್ ಬೆಂಬಲಿಗರಲ್ಲಿ ಹೊಸ ಜೋಶ್ ಮೂಡಿದೆ