ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧದ ಬಗ್ಗೆ ಭಾರತೀಯ ಸೇನೆಯ ಮೂರೂ ಪಡೆಗಳ ಮುಖಂಡರುಗಳು ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ನೀಡಿದ್ದಾರೆ. ಭಾರತ-ಪಾಕ್ ಯುದ್ಧ ಶುರುವಾದ ಬಳಿಕ ಭಾರತೀಯ ವಾಯುಸೇನೆ ಬರೋಬ್ಬರಿ 150ಕಿಮೀನಷ್ಟು ಪಾಕಿಸ್ತಾನದೊಳಕ್ಕೆ ನುಗ್ಗಿತ್ತು ಅನ್ನೋದು ಬಹಿರಂಗ ಆಗಿದೆ.
ಭಾರತೀಯ ವಾಯುಸೇನೆಯ ಸುಖೋಯ್ ಯುದ್ಧ ವಿಮಾನಗಳು ಕರಾಚಿವರೆಗೂ ಹೋಗಿತ್ತು. ಭಾರತದ ಗಡಿಯಿಂದ 150 ಕಿಮೀ ದೂರದಲ್ಲಿರುವ ಕರಾಚಿಯ ಮಲಿರ್ ಕಂಟೋನ್ಮೆಂಟ್ ಮೇಲೂ ಬಾಂಬ್ಗಳನ್ನ ಸುರಿಸಿ ವಾಪಸಾಗಿವೆ. ಕಚಾರಿ ಬಂದರು ಬಳಿಯಿರೋ ಮಲಿರ್ ಕಂಟೋನ್ಮೆಂಟ್ ಬಳಿ ಇರೋ ಕೆಲ ಟಾರ್ಗೆಟ್ಗಳನ್ನೂ ಭಾರತೀಯ ವಾಯುಸೇನೆಯ ಫೈಟರ್ಜೆಟ್ಗಳು ಉಡಾಯಿಸಿ ಬಂದಿದೆ. ಏರ್ ಮಾರ್ಷಲ್ ಎಕೆ ಭಾರ್ತಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
ಇದರ ಜೊತೆಗೆ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ವರೆಗೂ ಭಾರತದ ಫೈಟರ್ಜೆಟ್ಗಳು ಹೋಗಿ ಬಂದಿವೆ. ರಾವಲ್ಪಿಂಡಿಯ ಚಕ್ಲಾಲ ಏರ್ಬೇಸ್, ರಫಿಕ್, ರಹಿಮ್ ಯಾರ್ ಖಾನ್, ಸರಗೋಧ, ಭುಲಾರಿ, ಜಾಕೋಬಾದ್ ಪ್ರದೇಶದ ಮೇಲೂ ದಾಳಿ ನಡೆಸಿ ಬಂದಿವೆ.