Top Newsರಾಜಕೀಯರಾಜ್ಯಸುದ್ದಿ

ವಿಜಯೇಂದ್ರ ಬಗ್ಗೆ ಮಾತಾಡಿದ್ರೆ ಸಹಿಸಲ್ಲ: ಶಾಸಕ ಸುರೇಶ್ ಗೌಡ ತಿರುಗೇಟು

ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಬಿ.ವೈ ವಿಜಯೇಂದ್ರ‌ ಪರ ಶಾಸಕ ಸುರೇಶ್ ಗೌಡ ಬ್ಯಾಟಿಂಗ್ ಮಾಡಿದ್ದಾರೆ.

ಯಡಿಯೂರಪ್ಪ ಬಗ್ಗೆ ಮಾತನಾಡುವವರ ವಿರುದ್ಧ ಇನ್ನು ಹೈಕಮಾಂಡ್ ಕ್ರಮ‌ ತೆಗೆದುಕೊಂಡಿಲ್ಲ ಅಂದ್ರೆ ನಮಗೆ ನೋವಾಗುತ್ತೆ. ಬಂಡಾಯ ಏಳುವವರ ವಿರುದ್ಧ ಹೈಕಮಾಂಡ್ ಕೂಡಲೇ ಕ್ರಮ ಕೈಗೊಳ್ಳಬೇಕು. ಬದಲಾವಣೆ ಮಾಡೋದು ಬಿಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ. ವಿಜಯೇಂದ್ರ ಅವರು ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಯಡಿಯೂರಪ್ಪನವರನ್ನ ಟೀಕೆ ಮಾಡೋದು ಸರಿಯಲ್ಲ. ನಾನು ಯತ್ನಾಳ್ ಗೆ ಹೇಳೋದು ಇಷ್ಟೇ. ನಿಮ್ಮದು ವೈಯಕ್ತಿಕ ಏನಾದ್ರು ಇದ್ರೆ ನಾಲ್ಕು ಗೋಡೆಯಲ್ಲಿ ಮಾತಾಡು. ಮೀಡಿಯಾ ಮುಂದೆ ಮಾತಾಡೋದು ಪಾರ್ಟಿಗೆ ಕ್ಷೋಭೆ ತರುವುದಿಲ್ಲ. ನಾನು ಸೇರಿದಂತೆ ಯಾರೇ ಆಗಲಿ ಮಿಡಿಯಾದಲ್ಲಿ ಮಾತಾಡಿದ್ರೆ ಕ್ರಮ ತೆಗೆದುಕೊಳ್ಳಬೇಕು. ಪಾರ್ಟಿ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡೋಕೆ ಯಾರಿಗೂ ಹಕ್ಕಿಲ್ಲ ಎಂದು ಶಾಸಕ ಸುರೇಶ್ ಗೌಡ ಹೇಳಿದರು.

ಯತ್ನಾಳ್ ಚಿಕ್ಕ ವಯಸ್ಸಿಗೆ ಬಿಜೆಪಿಯಿಂದ ಗೆದ್ದು ಕೇಂದ್ರ ಮಂತ್ರಿಯಾಗಿದ್ದವರು. ಯಡಿಯೂರಪ್ಪನವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ವಿರೋಧ ಪಕ್ಷದ ನಾಯಕರಾಗಿದ್ದವರು,‌ ಡಿಸಿಎಂ ಆಗಿದ್ದವರು. ಅವರನ್ನ ಟೀಕೆ ಮಾಡ್ತಾರೆ ಅಂದ್ರೆ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಂಡಿಲ್ಲ ಅಂದ್ರೆ ನಮಗೆ ನೋವಾಗುತ್ತೆ. ಯಡಿಯೂರಪ್ಪನವರ ಬಗ್ಗೆ ಯಾರೇ ಮಾತಾಡಿದ್ರು ನಮಗೆ ನೋವಾಗುತ್ತೆ ಎಂದರು.

Comments (0)

Your email address will not be published. Required fields are marked *

Back to top button