Tuesday, June 24, 2025
25.1 C
Bengaluru
Google search engine
LIVE
ಮನೆ#Exclusive Newsಸಿದ್ದರಾಮಯ್ಯ ಹಾಗೂ ಅವರ ಮಗ ಯತೀಂದ್ರ ತೀವ್ರ ಎಡಪಂಥೀಯರು ; ಅರವಿಂದ ಬೆಲ್ಲದ

ಸಿದ್ದರಾಮಯ್ಯ ಹಾಗೂ ಅವರ ಮಗ ಯತೀಂದ್ರ ತೀವ್ರ ಎಡಪಂಥೀಯರು ; ಅರವಿಂದ ಬೆಲ್ಲದ

ಹುಬ್ಬಳ್ಳಿ : ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಅವರಿಗೆ ಈ ದೇಶದ ಸಂಸ್ಕೃತಿ, ನಮ ಭಾಷೆ ನಮ್ಮತನ ಬಗ್ಗೆ ಗೊತ್ತಿಲ್ಲ. ಸಿದ್ದರಾಮಯ್ಯಯವರು ಹಾಗೂ ಅವರ ಪುತ್ರ ಯತೀಂದ್ರರವರು ಎಕ್ಸ್ಟ್ರೀಮ್ ಲೇಫ್ಟಿಸ್ಟರು ಎಂದು ಶಾಸಕ ಅರವಿಂದ ಬೆಲ್ಲದ ಕುಟುಕಿದರು.

ಹಿಂದೂ ಮೂಲಭೂತವಾದಿಗಳು ಉಗ್ರರು ಎಂದು ಡಾ.ಯತೀಂದ್ರ ನೀಡಿರುವ ಹೇಳಿಕೆ ವಿಚಾರವಾಗಿ ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಬೆಲ್ಲದ, ಸಿದ್ದರಾಮಯ್ಯ ಹಾಗೂ ಯತೀಂದ್ರ ಅವರಿಗೆ ನಮ್ಮ ದೇಶದ ಭಾಷೆ ಗೊತ್ತಿಲ್ಲ. ಅವರಿಗೆ ನಮ್ಮತನ ಎನ್ನುವುದರ ಬಗ್ಗೆ ಗೌರವ ಇಲ್ಲ.

ಉದಾಹರಣೆಗೆ ಸಿಎಂ ಸಿದ್ದರಾಮಯ್ಯ ಅವರನ್ನೇ ನೋಡಿ ಮೈಸೂರು ಮಹಾರಾಜರನ್ನು ಇಡೀ ಜಗತ್ತೆ ಗೌರವಿಸುತ್ತದೆ. ಆದರೆ, ಇವರು ಅವರ ಆಸ್ತಿ, ಮನೆ ಕಸಿದುಕೊಳ್ಳಲು ಬೆನ್ನು ಹತ್ತಿದ್ದಾರೆ. ತಾವು ಅಕ್ರಮವಾಗಿ ಕೋಟಿಗಟ್ಟಲೇ ಆಸ್ತಿ ಮಾಡಿದ್ದಾರೆ. ಆದರೆ, ರಾಜರ ಮನೆಯನ್ನು ಕಸಿದುಕೊಳ್ಳಲು ಹೊರಟಿದ್ದಾರೆ. ಇಷ್ಟೊಂದು ಕೆಟ್ಟ, ವಿಕೃತ ಸ್ವಭಾವ ಇವರಲ್ಲಿದೆ. ದೇವರು ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಬೆಲ್ಲದ ಹೇಳಿದರು..

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments