#Exclusive NewsTop Newsರಾಜಕೀಯಸುದ್ದಿ
ಶಾಲೆಯ ಬದಲು ಬಾರ್ ನಿರ್ಮಿಸಿದ್ದಾರೆ ; AAPಗೆ ವ್ಯಂಗ್ಯ ಮಾಡಿ ಅನುರಾಗ್ ಠಾಕೂರ್

ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ಅನುರಾಗ್ ಠಾಕೂರ್, ದೆಹಲಿಯಲ್ಲಿ ಶಾಲೆಯ ಬದಲು ಬಾರ್ ತೆರೆದಿದ್ದಾರೆ ಎಂದು ಟೀಕಿಸಿದ್ದಾರೆ.
ದೆಹಲಿಯಲ್ಲಿ ಚುನಾವಣಾ ಗದ್ದಲದ ನಡುವೆಯೇ, ಬಿಜೆಪಿ ಸಂಸದ ಅನುರಾಗ್ ಠಾಕೂರ್ ಮದ್ಯದ ಹಗರಣದ ಬಗ್ಗೆ ಆಮ್ ಆದ್ಮಿ ಪಕ್ಷವನ್ನು ತೀವ್ರವಾಗಿ ಗುರಿಯಾಗಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅನುರಾಗ್ ಠಾಕೂರ್ ಅವರು ದೆಹಲಿ ಮದ್ಯ ಹಗರಣವು 2026 ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ .
ಶಾಲೆ ಕಟ್ಟುತ್ತೇವೆ ಎಂದು ಆಮ್ ಆದ್ಮಿ ಪಕ್ಷ ಹೇಳಿತ್ತು, ಆದರೆ ಶಾಲೆಯ ಬದಲು ಬಾರ್ ನಿರ್ಮಿಸಲಾಗಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.




