ನವದೆಹಲಿ: ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದೊಳಗೆ ಸುಮಾರು 2,000 ಚದರ ಅಡಿ ಅಳತೆಯ ಅಕ್ಕಪಕ್ಕದ ನಿವೇಶನಗಳಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕವನ್ನು ನಿರ್ಮಿಸಲು ಅವರ ಕುಟುಂಬದಿಂದ ಅನುಮೋದನೆಗಾಗಿ ಕಾಯುತ್ತಿದ್ದಾರೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳ ಭೇಟಿಯ ನಂತರ ಸಿಬ್ಬಂದಿ ಸ್ಥಳವನ್ನು ಸ್ವಚ್ಛಗೊಳಿಸಿ ಅಲ್ಲಿರುವ ಹುಲ್ಲನ್ನು ಕತ್ತರಿಸಿ ತೆಗೆದಿದ್ದಾರೆ. ಸ್ಮಾರಕ ನಿರ್ಮಾಣದ ಅಂದಾಜು ಸಿದ್ಧಪಡಿಸಲಾಗಿದೆ.
ಸುಮಾರು 45 ಎಕರೆಗಳಲ್ಲಿ ಹರಡಿರುವ ರಾಷ್ಟ್ರೀಯ ಸ್ಮೃತಿ ಸ್ಥಳ ಸಂಕೀರ್ಣವು ಯಮುನಾ ದಂಡೆಯ ಉದ್ದಕ್ಕೂ ರಿಂಗ್ ರೋಡ್ ಮತ್ತು ಸಲೀಂಘರ್ ಬೈಪಾಸ್ ನಡುವೆ ಇದೆ. ಈ ಎರಡು ತಾಣಗಳು ಪಿ ವಿ ನರಸಿಂಹ ರಾವ್ ಅವರ ಸ್ಮಾರಕದ ಪಕ್ಕದಲ್ಲಿವೆ. ಅವುಗಳು ಸುಸಜ್ಜಿತ ಹಾದಿಗಳಿಂದ ಸುತ್ತುವರಿದಿವೆ. ಮಾಜಿ ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳಾದ ಜೈಲ್ ಸಿಂಗ್, ಶಂಕರ್ ದಯಾಳ್ ಶರ್ಮಾ, ಆರ್ ವೆಂಕಟರಾಮನ್, ಕೆ ಆರ್ ನಾರಾಯಣನ್, ಚಂದ್ರ ಶೇಖರ್ ಮತ್ತು ಐ ಕೆ ಗುಜ್ರಾಲ್ ಅವರ ಸ್ಮಾರಕಗಳಿಂದ ಸುತ್ತುವರಿದಿದೆ. ಈ ಸ್ಥಳದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆ ನಡೆದ ಸದೈವ್ ಅಟಲ್ ಸ್ಮಾರಕ ಉದ್ಯಾನವನವಿದೆ.