
ಮೈಸೂರು : ರಾಜಕೀಯ ಜೀವನದಲ್ಲಿ ಎಂದು ಆಸ್ತಿ ಮಾಡುವ ಆಸೆ ಬಂದಿಲ್ಲ. ಇದುವರೆಗೂ ಅದನ್ನು ಮಾಡಿಲ್ಲ ನನ್ನ ಜೀವನ ತೆರೆದ ಪುಸ್ತಕ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಗರದ ಮಾಹಾರಾಜ ಮೈದಾನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಹೆಂಡತಿ ಎಂದಿಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ನಾನು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕು ಬಂದಿಲ್ಲ. ಇಂಥವಳು ತಪ್ಪು ಮಾಡಲು ಸಾಧ್ಯವೇ ಎಂದು ಜನರನ್ನು ಪ್ರಶ್ನಿಸಿದರು.
ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ಜನರಿಗೆ ದ್ರೋಹ ಮಾಡಿಲ್ಲ, ಮಾಡಲ್ಲ, ನಾನು ರಾಜಕೀಯದಲ್ಲಿ ಇರುವವರೆಗೆ ಮೋಸ ಮಾಡಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಹಿಂದುಳಿದವರ, ಬಡವರ, ಹಾಗೂ ದೀನ-ದಲಿತರನ್ನು ಮುಖ್ಯವಾಹಿನಿಗೆ ತರಬೇಕು ಎಂಬುದು ಬಿಟ್ಟರೆ ಆಸ್ತಿ ಮಾಡಬೇಕು ಎಂಬ ಯಾವ ಆಸೆಯೂ ನನಗಾಗಲಿ ನನ್ನ ಕುಟುಂಬಕ್ಕಾಗಲಿ ಇಲ್ಲ ಎಂದು ತಿಳಿಸಿದರು.




